Select Your Language

Notifications

webdunia
webdunia
webdunia
webdunia

ಭಗವಾನ್ ವಿರುದ್ಧ ಸರಣಿ ದೂರುಗಳು ದಾಖಲು!

ಭಗವಾನ್ ವಿರುದ್ಧ ಸರಣಿ ದೂರುಗಳು ದಾಖಲು!
ಮೈಸೂರು , ಶುಕ್ರವಾರ, 28 ಡಿಸೆಂಬರ್ 2018 (16:07 IST)
ಶ್ರೀರಾಮನ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಸಾಹಿತಿ ವಿರುದ್ಧ ರಾಜ್ಯದೆಲ್ಲೆಡೆ ಸರಣಿ ದೂರುಗಳು ದಾಖಲು ಆಗುತ್ತಿವೆ.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು, ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ‌ವಿಚಾರಕ್ಕೆ ಸಂಬಂಧಿಸಿದಂತೆ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಸರಣಿ ದೂರುಗಳು ದಾಖಲಾಗುತ್ತಿವೆ. ಮೈಸೂರಿನಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.

ಸಂಜಯ್ ಎಂಬುವರಿಂದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ದೂರುದಾರ ಸಂಜಯ್ ವಿದ್ಯಾರಣ್ಯಪುರಂ‌ ನಿವಾಸಿ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಕಲಂ ಅಡಿ ದೂರು ದಾಖಲು ಮಾಡಿದ್ದಾರೆ. ಪ್ರೊ.ಭಗವಾನ್ ರನ್ನು ಬಂಧಿಸಿ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ‌ ದೂರಿನಲ್ಲಿ ಆಗ್ರಹ ಮಾಡಲಾಗಿದೆ.

2015 ರಲ್ಲಿ ಭಗವಾನ್ ವಿರುದ್ಧ ಇದೇ ರೀತಿ ದೂರು ದಾಖಲಾಗಿತ್ತು. ಆ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಜಾಮೀನು ರದ್ದು ಪಡಿಸಬೇಕು ಎಂದು ದೂರುದಾರ‌ ಸಂಜಯ್ ಆಗ್ರಹ ಮಾಡಿದ್ದಾರೆ.

ಈಗಾಗಲೇ ಮಂಡ್ಯ, ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ಇದೇ ವಿಚಾರವಾಗಿ ದೂರುಗಳು ದಾಖಲಾಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಕೃತಿ ನಿಷೇಧಕ್ಕೆ ಒತ್ತಾಯ