Select Your Language

Notifications

webdunia
webdunia
webdunia
webdunia

ರಜೆಗೆ ಬಂದ ಉಪನ್ಯಾಸಕ ಮಾಡಿದ್ದೇನು?

ರಜೆಗೆ ಬಂದ ಉಪನ್ಯಾಸಕ ಮಾಡಿದ್ದೇನು?
ಮಂಡ್ಯ , ಸೋಮವಾರ, 4 ನವೆಂಬರ್ 2019 (19:02 IST)
ರಜೆಗಾಗಿ ಉಪನ್ಯಾಸಕರೊಬ್ಬರು ತಮ್ಮ ತಂಗಿಯ ಮನೆಗೆ ಬಂದಾಗ ನಡೆಯಬಾರದ ಘಟನೆ ನಡೆದುಹೋಗಿದೆ.

ಕಾಲುಜಾರಿ ಕಾಲುವೆಗೆ ಬಿದ್ದು ಉಪನ್ಯಾಸಕನ ಸಾವನ್ನಪ್ಪಿದ್ದಾನೆ.

ಚನ್ನರಾಯಪಟ್ಟಣ  ಸಾಹುಕಾರ್ ಚನ್ನಯ್ಯ ನಾಲೆಯಲ್ಲಿ ಸ್ನಾನ ಮಾಡಲು ಹೋಗಿದ್ದ ವೇಳೆ ಮದ್ದೂರು ಆನೆದೊಡ್ಡಿಯ ಎಂ.ಬಿ.ತುಳಸೀಪ್ರಸಾದ್ (32) ನೀರುಪಾಲಾಗಿದ್ದಾರೆ.

ಪತ್ನಿ ಗುಣಶ್ರೀ ಮತ್ತು ಮೂರು ವರ್ಷದ ಮಗಳು ತನ್ವಿಪ್ರಸಾದ್ ಸೇರಿದಂತೆ ಅಪಾರ ಬಂಧು ಬಳಗವನ್ನು ತುಳಸೀಪ್ರಸಾದ್ ಅಗಲಿದ್ದಾರೆ.

ಕೆ.ಆರ್.ಪೇಟೆ  ಶೀಳನೆರೆ ಹೋಬಳಿ ಭೈರಾಪುರ ಬಳಿ ಕಾಲುವೆಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಮೃತದೇಹವನ್ನು 
ನೀರಿನಿಂದ ತೆಗೆದು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು.

ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ
ತುಳಸೀಪ್ರಸಾದ್ ರಜೆಗೆಂದು ತನ್ನ ಸಹೋದರಿಯ ಮನೆಗೆ ಬಂದಿದ್ದಾಗ ಈ ಕೃತ್ಯ ಸಂಭವಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತ್ತೆ – ಮಾವನ ಕಿರುಕಳಕ್ಕೆ ಬೇಸತ್ತ ಗೃಹಿಣಿ ಹೀಗೆ ಮಾಡೋದಾ?