Select Your Language

Notifications

webdunia
webdunia
webdunia
webdunia

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ: ನಟ ಜಗ್ಗೇಶ್ ವಿರುದ್ಧ ದೂರು

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ: ನಟ ಜಗ್ಗೇಶ್ ವಿರುದ್ಧ ದೂರು
Mysore , ಗುರುವಾರ, 30 ಮಾರ್ಚ್ 2017 (12:10 IST)
ಮೈಸೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮುಂದಿನ ವಾರ ನವರಸನಾಯಕ ಜಗ್ಗೇಶ್ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದಕ್ಕೀಗ ಸಂಕಟ ಎದುರಾಗಿದೆ.

 

CLICK HERE.. ಸುದೀಪ್ ಹೆಸರಲ್ಲಿ ನಕಲಿ ಟ್ವೀಟ್ ಸೃಷ್ಟಿಸಿ ಅವಾಂತರ

ಬಿಜೆಪಿ ನಾಯಕರೂ ಆಗಿರುವ ಜಗ್ಗೇಶ್ ಈ ಕಾರ್ಯಕ್ರಮದ ಮೂಲಕ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡುವ ಸಾಧ್ಯತೆಯಿದೆ. ಹೀಗಾಗಿ ಉಪಚುನಾವಣೆ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗದಂತೆ ನಿರ್ಬಂಧ ವಿಧಿಸಬೇಕೆಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

 
ಈ ಬಗ್ಗೆ ಮಾತನಾಡಿರುವ ಜಗ್ಗೇಶ್, ಚುನಾವಣೆಗೂ, ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ಹಾಗಿದ್ದರೂ, ಚುನಾವಣಾ ಆಯೋಗ ಕ್ರಮ ಕೈಗೊಂಡರೆ ನನ್ನ ಅಭ್ಯಂತರವಿಲ್ಲ. ನಿಮ್ಮ ಘಟಾನುಘಟಿ ನಾಯಕರೆನಿಸಿದ್ದ ಎಸ್ ಎಂ ಕೃಷ್ಣ ಅವರೇ ಬಿಜೆಪಿ ಬಂದಿರುವ ಏಟು ನಿಮಗೆ ತಡೆಯಲಾಗಿಲ್ಲ. ಇನ್ನು ಈ ರೀತಿಯ ಮಾರ್ಗಗಳಿಂದ ಬಿಜೆಪಿಯನ್ನು ತಡೆಯುವ ಯತ್ನ ಬೇಡ ಎಂದು ಜಗ್ಗೇಶ್ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಗುತ್ತೇನೆಂದು ಯೋಗಿ ಆದಿತ್ಯನಾಥ್ ಗೆ ಗೊತ್ತಾಗಿದ್ದು ಯಾವಾಗ ಗೊತ್ತಾ?!