Publish Date: Fri, 26 May 2017 (12:19 IST)
Updated Date: Fri, 26 May 2017 (12:21 IST)
ಬೆಂಗಳೂರು: ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳೂ ಮುಂಬರುವ ಚುನಾವಣೆಯ ತಯಾರಿಯಲ್ಲಿ ಬ್ಯುಸಿಯಾಗಿವೆ. ನಾವ್ಯಾರೂ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ. ಬಿಜೆಪಿಗೆ ಮುಂದಿನ ಚುನಾವಣೆಗೆ 150 ಸೀಟುಗಳನ್ನು ಗೆಲ್ಲುವುದೇ ಗುರಿಯಾಗಿದೆ. ಜೆಡಿಎಸ್ ಕೂಡಾ ಅಧಿಕಾರ ಪಡೆಯಲು ತಯಾರಿ ನಡೆಸುತ್ತಿದೆ.
ಹೀಗಿರುವಾಗ ನಾವೆಲ್ಲರೂ ರೈತರನ್ನು ಮರೆತಿದ್ದೇವೆ. ನಮ್ಮೆಲ್ಲರ ಗಮನ ಚುನಾವಣೆ ಮೇಲಿದೆ. ರೈತರ ಸಮಸ್ಯೆಗಳನ್ನು ನಾವ್ಯಾರೂ ಆಲಿಸುತ್ತಿಲ್ಲ. ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ