Select Your Language

Notifications

webdunia
webdunia
webdunia
webdunia

ಸ್ವಾಮಿಗಳು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥ ಸಾರ್ಥಕ ಬದುಕಿಗೆ ದಾರಿ

ಸ್ವಾಮಿಗಳು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥ ಸಾರ್ಥಕ ಬದುಕಿಗೆ ದಾರಿ
bangalore , ಶನಿವಾರ, 25 ಸೆಪ್ಟಂಬರ್ 2021 (21:58 IST)
ಪ್ರತಿಯೊಬ್ಬ ಮನುಷ್ಯನಲ್ಲಿ ಒಳಧ್ವನಿ ಇರುತ್ತದೆ. ಯಾರು ಒಳಧ್ವನಿಗೆ ಕಿವಿಗೊಡುತ್ತಾರೆ ಅವರ ಜೀವನದ ಅರ್ಥ ಪಡೆಯುತ್ತಾರೆ ಎಂದು ಹೇಳಿದರು.
ಅಥಣಿಯ ಮೊಟಿಗಿಮಠದ ಪೀಠಾಧಿಪತಿ ಶ್ರೀ ಪ್ರಭು ಚನ್ನಬಸವ ವಿರಚಿತ 'ಮಹಾತ್ಮರ ಚರಿತಾಮೃತ' ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥ ಸಾರ್ಥಕ ಬದುಕಿಗೆ ದಾರಿದೀಪವಾಗಿದೆ.
ಅಥಣಿಯ ಚನ್ನಬಸವ ಸ್ವಾಮಿಗಳು ಅತ್ಯಂತ ಕ್ರಿಯಾಶೀಲರು. ಚಿಂತನೆಯ ಜೊತೆಗೆ ಕ್ರಿಯಾಶೀಲತೆ ಮುಖ್ಯ. ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲತೆ ಬೇಕು. ಸ್ವಾಮೀಜಿಗಳು ಒಂದು ಹೆಜ್ಜೆ ಮುಂದೆ ಹೋಗಿ ಒಬ್ಬರೂ ಕ್ರಿಯಾಶೀಲರಾಗುತ್ತಾರೆ ದಾರ್ಶನಿಕ ಕ್ರಿಯಾಶೀಲತೆ ಅದಕ್ಕಾಗಿ ಶ್ರೀಗಳಿಗೆ ಅಭಿನಂದನೆಗಳು ಎಂದು ಕರೆಯಲಾಗುತ್ತದೆ
ಸಾಮಾನ್ಯರೂ ಕೂಡ ಮಹಾತ್ಮರಾಗಬಹುದು:
ಬದುಕನ್ನು ಬಹುತೇಕವಾಗಿ ಹೊರಜಗತ್ತು, ಹೊರ ಒತ್ತಡದಲ್ಲಿ  ಹಾಗೂ ಇತರರಿಗಾಗಿಯೆ ಕಳೆಯುತ್ತೇವೆ. ಚಿಂತನೆಗೆ ಹಾಗೂ ಒಳಧ್ವನಿಗೆ ಸಮಯವನ್ನು ನೀಡಿದ ಮಹಾತ್ಮರು ನಮ್ಮ ಮುಂದೆ ಇಟ್ಟಿದ್ದಾರೆ. ಇದನ್ನು ಓದಿದರೆ, ನಮ್ಮ ಬದುಕು ಬದಲಾಗುತ್ತದೆ ಎಂಬ ಪ್ರಬಲ ನಂಬಿಕೆ ನನ್ನದು.  ಬದಲಾವಣೆ ಮಾಡುವ ಶಕ್ತಿಯಿರುವ ಗ್ರಂಥ. ಅನೇಕರು ಎಲೆಮರೆಕಾಯಿಯಂತೆ ಸಾಧನೆ ಮಾಡುತ್ತಾರೆ. ಮಹಾತ್ಮರ ಚರಿತ್ರೆಯನ್ನು ನಮ್ಮ ಮುಂದೆ ಇಟ್ಟು ಸಾಮಾನ್ಯರೂ ಕೂಡ ಮಹಾತ್ಮರಾಗಬಹುದು ಎಂದು ಸ್ವಾಮಿಗಳು ತಿಳಿಸಿದ್ದಾರೆ. ಸಾವಿನ ನಂತರವೂ ಅವರನ್ನು ನೆನೆಸಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ ಎಂದರು.
ಬಸವಣ್ಣನವರ ತತ್ತಾದರ್ಶ ಪಾಲಿಸಿ:
ಸಾಧಕರು ಶ್ರೀಮಂತ ಬದುಕನ್ನು ಬದುಕಿದ್ದಾರೆ. ಭಾವಶ್ರೀಮಂತಿಕೆ, ಸಂಬಂಧಗಳ ಶ್ರೀಮಂತಿಕೆಯನ್ನು ಬಿಟ್ಟು ಹೋಗಿದ್ದಾರೆ. ಹೊರ ಬದುಕಿನಲ್ಲಿ ಏರುಪೇರುಗಳಾಗುತ್ತವೆ. ಒಳ ಬದುಕು ನಿರಂತರವಾಗಿ ಸಾಗುತ್ತದೆ.  ಅವರು ಸಾಗಿರುವ ಸಾವಿರಾರು ಹೆಜ್ಜೆಗಳಲ್ಲಿ ಎರಡು ಹೆಜ್ಜೆ ಸಾಗಿದರೆ, ದೊಡ್ಡ ಸಾಧನೆಯಾಗುತ್ತದೆ. ಬಸವಣ್ಣನವರ ಬದುಕನ್ನೇ ತೆಗೆದುಕೊಂಡರೆ, ಸಾಮಾನ್ಯರ ಕುಟುಂಬದಿಂದ ಬಂದರೂ, ಅವರ ಆಚಾರ ವಿಚಾರಗಳಿಂದ ಬಹಳ ದೊಡ್ಡ ಎತ್ತರಕ್ಕೆ ಏರಿದರು. ರಾಜ್ಯಕ್ಕೆ ಬಂದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಸವಾಲುಗಳನ್ನು ಸ್ವೀಕರಿಸುತ್ತೇನೆ. ನಿಮ್ಮ ನಂಬಿಕೆ, ವಿಶ್ವಾಸಕ್ಕೆ ಕಿಂಚಿತ್ತೂ ವ್ಯತ್ಯಾಸವಾದದಂತೆ ಕೆಲಸ ಮಾಡುತ್ತೇನೆ. ನಿಮ್ಮ ಮನೆಗೆ ಹೂವನ್ನು ತರುತ್ತೇನೆ, ಹುಲ್ಲು ತರುವುದಿಲ್ಲ ಎಂದರು.
ಕರ್ನಾಟಕ ಸಂಪದ್ಭರಿತ ರಾಜ್ಯ:
ಕರ್ನಾಟಕ ತಾಂತ್ರಿಕವಾಗಿ ಸಂಪದ್ಭರಿತ ರಾಜ್ಯ. ಅದರ ಸದ್ಬಳಕೆಯ ಮಾಡುವ ಮುಖಾಂತರ ಈ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಸ್ವಾಭಿಮಾನದ ಬದುಕುಳಿಯುವ ಬದುಕಲು, ಸೌಲಭ್ಯಗಳನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ. ಅವರ ಜೀವನಗುಣಮಟ್ಟವನ್ನು ಹೆಚ್ಚಿಸಿ, ಶಿಕ್ಷಣ, ಆರೋಗ್ಯ ಮತ್ತು ಕೈಗಳಿಗೆ ಕೆಲಸ ನೀಡುವ ಮೂಲಭೂತ ಕಾರ್ಯವನ್ನು ಮಾಡುತ್ತೇನೆ. ಈ ದೊಡ್ಡ ಕೆಲಸಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರ್ಥ.
ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ಸಚಿವ ವಿ.ಸೋಮಣ್ಣ, ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್.ವಿ.ಪಾಟೀಲ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಸವ ವೇದಿಕೆ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಸೇರಿ ಮಳೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯನ್ನು ಒಪ್ಪಿಕೊಂಡ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್