Webdunia - Bharat's app for daily news and videos

Install App

ಪ್ರಾಯೋಜಿತ: ಬೆಂಗಳೂರಿನ 5 ಅಪಾರ್ಟ್ಮೆಂಟ್ಗಳಿಂದ ನಿತ್ಯ 3 ಲಕ್ಷ ಲೀಟರ್ ನೀರು ಮರುಬಳಕೆ

Krishnaveni K
ಗುರುವಾರ, 4 ಸೆಪ್ಟಂಬರ್ 2025 (15:49 IST)
ಬೆಂಗಳೂರು, ಸೆಪ್ಟೆಂಬರ್ 4, 2025: ಐಟಿ ನಗರಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಯೊಂದು ನಡೆದಿದೆ. ನಗರದ ಐದು ಪ್ರಮುಖ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, 'ಬೋಸಾನ್ ವೈಟ್‌ವಾಟರ್' ಎಂಬ ಜಲ ಉಪಯುಕ್ತ ಕಂಪನಿಯೊಂದಿಗೆ ಕೈಜೋಡಿಸಿ, ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಮೂಲಕ ಪ್ರತಿನಿತ್ಯ ಬರೋಬ್ಬರಿ 3 ಲಕ್ಷ ಲೀಟರ್ ನೀರನ್ನು ಉಳಿತಾಯ ಮಾಡುತ್ತಿವೆ.
 
ಈ ಯೋಜನೆಯಡಿಯಲ್ಲಿ, ಪ್ರತಿಯೊಂದು ಅಪಾರ್ಟ್‌ಮೆಂಟ್‌ನಲ್ಲಿ ಅತ್ಯಾಧುನಿಕ 11 ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಯಿಂದ ಸಂಸ್ಕರಿಸಲ್ಪಟ್ಟ ಹೆಚ್ಚುವರಿ ನೀರನ್ನು ಉತ್ತಮ ಗುಣಮಟ್ಟದ ಮರುಬಳಕೆ ಯೋಗ್ಯ ನೀರನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರತಿ ಅಪಾರ್ಟ್‌ಮೆಂಟ್ ದಿನಕ್ಕೆ ಸುಮಾರು 60,000 ಲೀಟರ್ ಶುದ್ಧ ನೀರನ್ನು ಉತ್ಪಾದಿಸಲಿದೆ.
 
ಈ ನೂತನ ಯೋಜನೆಗೆ ಸೇರ್ಪಡೆಗೊಂಡಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಹೊರಮಾವಿನಲ್ಲಿರುವ ಡಿಎಸ್‌ಆರ್ ವಾಟರ್‌ಸ್ಕೇಪ್ಸ್, ಸುಂಕದಕಟ್ಟೆಯಲ್ಲಿರುವ ದಿ ಟ್ರೀ ಬೈ ಪ್ರಾವಿಡೆಂಟ್, ವೈಟ್‌ಫೀಲ್ಡ್‌ನಲ್ಲಿರುವ ಎಸ್‌ಜೆಆರ್ ಬ್ರೂಕ್ಲಿನ್, ರಾಯಸಂದ್ರಲ್ಲಿರುವ ಎಂಜೆ ಅಮೇಡಿಯಸ್ ಹಾಗೂ ಜಿಗಣಿಯಲ್ಲಿರುವ ಡಿಎಲ್‌ಎಫ್ ವುಡ್‌ಲ್ಯಾಂಡ್ ಹೈಟ್ಸ್ ಸೇರಿವೆ.
 
ಈಗಾಗಲೇ 18 ಇತರ ವಸತಿ ಸಮುಚ್ಚಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬೋಸಾನ್ ವೈಟ್‌ವಾಟರ್, ಈ ಎಲ್ಲಾ ಅಪಾರ್ಟ್‌ಮೆಂಟ್‌ಗಳಿಂದ ಒಟ್ಟಾಗಿ ಪ್ರತಿದಿನ 10 ಲಕ್ಷ ಲೀಟರ್‌ಗಿಂತಲೂ ಹೆಚ್ಚು ನೀರನ್ನು ಉಳಿತಾಯ ಮಾಡುತ್ತಿದೆ. ಉತ್ಪಾದನೆಯಾದ ಶುದ್ಧ ನೀರನ್ನು ಬೋಸಾನ್ ವೈಟ್‌ವಾಟರ್ ತನ್ನ ಟ್ಯಾಂಕರ್ ಜಾಲದ ಮೂಲಕ ಸಮೀಪದ ಕೈಗಾರಿಕೆಗಳಿಗೆ ಪೂರೈಸುತ್ತದೆ.
 
ಬೋಸಾನ್ ವೈಟ್‌ವಾಟರ್‌ನ ಈ ಮರುಬಳಕೆ ವ್ಯವಸ್ಥೆಯನ್ನು ಅಪಾರ್ಟ್‌ಮೆಂಟ್ ಆವರಣದಲ್ಲಿಯೇ ಸ್ಥಾಪಿಸಲಾಗುತ್ತದೆ. ಸಾಮಾನ್ಯವಾಗಿ, ಅಪಾರ್ಟ್‌ಮೆಂಟ್‌ಗಳು ತಮ್ಮ ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರಿನ ಸ್ವಲ್ಪ ಭಾಗವನ್ನು ತೋಟಗಾರಿಕೆಗೆ ಬಳಸಿ, ಉಳಿದ ನೀರನ್ನು ವಿಲೇವಾರಿ ಮಾಡಲು ಹೆಚ್ಚುವರಿ ಹಣ ಖರ್ಚು ಮಾಡುತ್ತವೆ. ಆದರೆ, ಬೋಸಾನ್ ವ್ಯವಸ್ಥೆಯು ಈ ಹೆಚ್ಚುವರಿ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ, ಉತ್ತಮ ಗುಣಮಟ್ಟದ ನೀರನ್ನಾಗಿ ಪರಿವರ್ತಿಸುತ್ತದೆ. ಈ ನೀರನ್ನು ಸ್ಥಳದಲ್ಲೇ ಸಂಗ್ರಹಿಸಿ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತದೆ.
 
ಈ ವ್ಯವಸ್ಥೆಯಿಂದ ಅಪಾರ್ಟ್‌ಮೆಂಟ್‌ಗಳಿಗೆ ಹಲವು ಅನುಕೂಲಗಳಿವೆ. ಮೊದಲನೆಯದಾಗಿ, ನೀರಿನ ಕೊರತೆಯಿರುವ ಸಮಯದಲ್ಲಿ ಇದು ನೀರಿನ ಭರವಸೆ ಒದಗಿಸುತ್ತದೆ. ಎರಡನೆಯದಾಗಿ, ಸಂಸ್ಕರಿಸದ ನೀರಿನ ಅತಿಯಾದ ಬಳಕೆಯಿಂದ ಕಟ್ಟಡಗಳಿಗೆ ಆಗಬಹುದಾದ ಹಾನಿ ತಡೆಯುತ್ತದೆ. ಅಂತಿಮವಾಗಿ, ಅಪಾರ್ಟ್‌ಮೆಂಟ್‌ಗಳು 'ಶೂನ್ಯ ದ್ರವ ತ್ಯಾಜ್ಯ' ಕಟ್ಟಡಗಳಾಗಲು ಸಹಾಯ ಮಾಡುವುದರ ಜೊತೆಗೆ, ಪರಿಸರ ನಿಯಮಗಳನ್ನು ಪಾಲಿಸಲು ಅನುವು ಮಾಡಿಕೊಡುತ್ತದೆ.
 
ಈ ಕುರಿತು ಮಾತನಾಡಿದ ಬೋಸಾನ್ ವೈಟ್‌ವಾಟರ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ವಿಕಾಸ್ ಬ್ರಹ್ಮಾವರ್, "ಹೆಚ್ಚುವರಿ ಎಸ್‌ಟಿಪಿ ನೀರು ಅಪಾರ್ಟ್‌ಮೆಂಟ್‌ಗಳಿಗೆ ಒಂದು ಹೊರೆಯಾಗಿದೆ ಮತ್ತು ಅದರ ಸರಿಯಾದ ವಿಲೇವಾರಿಗೆ ಪ್ರಸ್ತುತ ಯಾವುದೇ ಮಾರ್ಗಗಳಿಲ್ಲ. ನಾವು ಈ ಹೊಣೆಯನ್ನು ಒಂದು ಸಂಪನ್ಮೂಲವಾಗಿ ಪರಿವರ್ತಿಸುವ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತೇವೆ. ನಮ್ಮ ವ್ಯವಸ್ಥೆಯು ಎಸ್‌ಟಿಪಿ ನೀರನ್ನು ಶುದ್ಧೀಕರಿಸಿ, ಆಂತರಿಕ ಬಳಕೆಗೆ ಯೋಗ್ಯವಾಗಿಸುತ್ತದೆ. ಉಳಿದ ನೀರನ್ನು 'ಪ್ರತಿ ಲೀಟರ್‌ಗೆ ಪಾವತಿ' ಆಧಾರದ ಮೇಲೆ ಕೈಗಾರಿಕೆಗಳಿಗೆ ಪೂರೈಸಲಾಗುತ್ತದೆ. ಈ ವಿಧಾನದಿಂದ, ಅಪಾರ್ಟ್‌ಮೆಂಟ್‌ ಸಮುದಾಯಗಳ ಮೇಲೆ ಆರ್ಥಿಕ ಹೊರೆ ಹಾಕದೆ ಜಲ ಮರುಬಳಕೆಯನ್ನು ವಿಸ್ತರಿಸಲು ನಮಗೆ ಸಾಧ್ಯವಾಗುತ್ತಿದೆ," ಎಂದರು.
 
ಎಸ್‌ಜೆಆರ್ ಬ್ರೂಕ್ಲಿನ್ ಅಪಾರ್ಟ್‌ಮೆಂಟ್‌ನ ಸಂಘದ ಸದಸ್ಯರಾದ ಸೆಲ್ವಪಾಂಡಿ ಅವರು, "ನಮ್ಮಲ್ಲಿನ ಹೆಚ್ಚುವರಿ ಎಸ್‌ಟಿಪಿ ನೀರು ವ್ಯರ್ಥವಾಗದೆ ಸದುಪಯೋಗವಾಗಬೇಕೆಂಬುದು ನಮ್ಮ ಆಶಯವಾಗಿತ್ತು. ಬೋಸಾನ್‌ನ ಈ ದೃಷ್ಟಿಕೋನದ ಭಾಗವಾಗುವುದು ಸುಸ್ಥಿರತೆಯ ಬಗೆಗಿನ ನಮ್ಮ ಬದ್ಧತೆಗೆ ಅನುಗುಣವಾಗಿದೆ. ಇದು ಪರಿಸರ ಸೇರಿದಂತೆ ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಸಂತಸ ವ್ಯಕ್ತಪಡಿಸಿದರು.
 
ಬೋಸಾನ್ ವೈಟ್‌ವಾಟರ್ ಬಗ್ಗೆ
 
ಬೋಸಾನ್ ವೈಟ್‌ವಾಟರ್ ಬೆಂಗಳೂರು ಮೂಲದ ಒಂದು ಜಲ ಉಪಯುಕ್ತತಾ ಕಂಪನಿಯಾಗಿದ್ದು, ಸಂಸ್ಕರಿಸಿದ ಚರಂಡಿ ನೀರನ್ನು ವಸತಿ ಮತ್ತು ವಾಣಿಜ್ಯ ಬಳಕೆಗೆ ಯೋಗ್ಯವಾದ ಉತ್ತಮ ಗುಣಮಟ್ಟದ ನೀರನ್ನಾಗಿ ಪರಿವರ್ತಿಸಲು ಸಮರ್ಪಿತವಾಗಿದೆ. ಇದರ 11-ಹಂತದ ಶುದ್ಧೀಕರಣ ಪ್ರಕ್ರಿಯೆ ಮತ್ತು IoT-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯು ಜಲ ಚಕ್ರವನ್ನು ಉತ್ತೇಜಿಸಿ, ಸಮುದಾಯಗಳು 'ಶೂನ್ಯ ದ್ರವ್ಯ ತ್ಯಾಜ್ಯ' ಗುರಿಯನ್ನು ಸಾಧಿಸಲು ನೆರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಡಿಕೆ ಶಿವಕುಮಾರ್ ಸಂಪುಟ ಸೇರಿದ 19 ಸಚಿವರು ಇವರೇ

ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧದ ಎಫ್ಐಆರ್ ಹಿಂಪಡೆಯುವ ಬಗ್ಗೆ ದೆಹಲಿ‌ ಕೋರ್ಟ್ ಮಹತ್ವದ ಸೂಚನೆ

ಎಲ್ಲಾ ಶಾಸಕರಿಗೂ ಒಂದೇ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ

ಈ ವಿಷಯಕ್ಕೆ ಪ್ರಧಾನಿ, ಗೃಹ ಸಚಿವರು ಸದನದಲ್ಲಿ ಉತ್ತರಿಸಬೇಕು: ಮಲ್ಲಿಕಾರ್ಜುನ ಖರ್ಗೆ

ಕಾರು ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣವಾದ ಅಪ್ರಾಪ್ತ, Deadly Video

ಮುಂದಿನ ಸುದ್ದಿ
Show comments