ನಗರದಲ್ಲಿ ನೀರಿಗೆ ಹಾಹಾಕಾರ - ಬಿಬಿಎಂಪಿ ಅಧಿಕಾರಿಗಳಿಂದ ಹೈವೋಲ್ಟೆಜ್ ಮೀಟಿಂಗ್

geetha
ಶನಿವಾರ, 24 ಫೆಬ್ರವರಿ 2024 (17:00 IST)
ಬೆಂಗಳೂರು-ಬೇಸಿಗೆ ಆರಂಭದಲ್ಲೇ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಅಭಾವ ಶುರುವಾಗಿದೆ.ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕಡೆ ನೀರಿನ ಅಭಾವ ಉಂಟಾಗಿದೆ ಎಂದು ಜಲಮಂಡಳಿಗೆ ಹಾಗೂ ಬಿಬಿಎಂಪಿ ಗೆ  ಸಾರ್ವಜನಿಕರಿಂದ ಸಾಲು ಸಾಲು ದೂರು ಬಂದಿದೆ.ನೀರಿನ ಅಭಾವ ಹಾಗೂ ಟ್ಯಾಂಕರ್ ದಂದೆ ಬಗ್ಗೆ ವಿಸ್ತೃತ ವರದಿ ಬಿಬಿಎಂಪಿಗೆ ನೀಡಲಾಗಿದೆ.ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಹಿನ್ನೆಲೆ ಎಚ್ಚೆತ್ತ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಹೈವೋಲ್ಟೇಜ್ ಸಭೆ ನಡೆಸಲಾಗಿದೆ.
 
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ  ಹೈವೋಲ್ಟೆಜ್ ಮೀಟಿಂಗ್ ನಡೆಯುತ್ತಿದ್ದು,ಮೀಡಿಂಗ್ ನಲ್ಲಿ ಬಿಬಿಎಂಪಿಯ ಎಲ್ಲಾ ವಲಯದ ಆಯುಕ್ತರು,ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.ಇನ್ನೂ ಬಿಬಿಎಂಪಿ 8 ವಲಯದ ವಿಶೇಷ ಆಯುಕ್ತರು,ಚೀಫ್ ಎಂಜನೀಯರ್ಸ್,ಯೋಜನಾ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದಾರೆ.ಇನ್ನೂ 110 ಹಳ್ಳಿಯ ಜೆ.ಸಿ ಅಧಿಕಾರಿಗಳು ಕೂಡ ಬಾಗಿಯಾಗಿದ್ದು, ಸುಮಾರು 80 ಕ್ಕೂ ಹೆಚ್ಚು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
 
ಈಗಾಗಲೇ ಹಲವು ಏರಿಯಾಗಳಲ್ಲಿ ವಾರವಾದ್ರೂ ನೀರಿಲ್ಲದೇ ಜನರು ಪರದಾಟ‌ ನಡೆಸಿದ್ದಾರೆ.ನಗರದಲ್ಲೇ ಹಲವು ಏರಿಯಾದ ಜನ ನೀರನ್ನ ಕಿಮೀವರೆಗೂ ಹೋಗಿ ತರುವ ದುಸ್ಥಿತಿ ಇದೆ ಹೀಗಾಗಿ ನೀರಿನ ಅಭಾವವನ್ನ ಖಾಸಗಿ ಟ್ಯಾಂಕರ್ ಮಾಲೀಕರು ಬಂಡವಾಳ ಮಾಡಿಕೊಂಡಿದ್ದಾರೆ.ಟ್ಯಾಂಕರ್ ನೀರಿನ ಬೆಲೆ ಏಕಾಏಕಿ ಹೆಚ್ಚಳವಾಗಿದೆ ಎಂದು ಸಭೆಯಲ್ಲಿ ಹಲವು ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ.
 
- ಸಮರ್ಪಕ ಕುಡಿಯುವ ನೀರು ಪೂರೈಕೆ..
- ಖಾಸಗಿ‌ ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ.
- ಟ್ಯಾಂಕರ್ ನೀರಿಗೆ ದರ ನಿಗಧಿ ಸಾಧ್ಯತೆ.
- ಜೂನ್ ವರೆಗೆ 10 ರಿಂದ 15 ಟಿಎಂಸಿ ನೀರಿನ ಅವಶ್ಯಕತೆ ಹಿನ್ನೆಲೆ.
- ನೀರನ್ನ ಉಳಿಸಿಕೊಂಡು ಸಮರ್ಪಕವಾಗಿ ಬಳಕೆ ಕ್ರಮದ ಬಗ್ಗೆ ಚರ್ಚೆ.
- ಬಿಬಿಎಂಪಿ, ಜಲಮಂಡಳಿಯಿಂದಲೇ ಟ್ಯಾಂಕರ್ ಮೂಲಕ ನೀರು ಸಪ್ಲೇ ಪ್ಲಾನ್.
- 40 ಟ್ಯಾಂಕರ್ ಮೂಲಕ ನೀರು ಸರಬರಾಜು ಬಗ್ಗೆ ‌ಚರ್ಚೆ ನಡೆಸುವ ಭಾಗಿಯಾಗಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಮೀಕ್ಷೆಯಿಂದಾಗಿ ಮಕ್ಕಳ ಕಲಿಕೆಗೆ ಭಾರೀ ಪೆಟ್ಟು: ವಿಜಯೇಂದ್ರ ಆಕ್ರೋಶ

ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ತಾಯಿ, ಪತಿಯ ಈ ಬೆದರಿಕೆಯೇ ಕಾರಣವಾಯಿತೇ

ಅಶ್ರಫ್ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಭರತ್‌ಗೆ ಬಿಗ್ ಶಾಕ್

ಐಷರಾಮಿ ಕಾರಿಗೆ ಬೇಡಿಕೆಯಿಟ್ಟ ಮಗ, ಕಬ್ಬಿಣದ ಸರಳಿನಿಂದ ಹೊಡೆದ ಅಪ್ಪನ ವಿರುದ್ಧ ಬಿತ್ತು ದೊಡ್ಡ ಕೇಸ್

ಬೆಂಗಳೂರಿನಲ್ಲಿ ಟ್ರಾಫಿಕ್ ಇರೋದು ಒಳ್ಳೇದು ಅನ್ನೋದಾ ಸಚಿವ ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments