Select Your Language

Notifications

webdunia
webdunia
webdunia
webdunia

ಯುದ್ಧ ಸನ್ನಿವೇಶ; ಕರ್ತವ್ಯದ ಕರೆಗೆ ಓಗೊಟ್ಟ ವೀರ ಸೈನಿಕರು

ಯುದ್ಧ ಸನ್ನಿವೇಶ; ಕರ್ತವ್ಯದ ಕರೆಗೆ ಓಗೊಟ್ಟ ವೀರ ಸೈನಿಕರು
ಯಾದಗಿರಿ , ಗುರುವಾರ, 28 ಫೆಬ್ರವರಿ 2019 (20:38 IST)
ಭಾರತ ಮತ್ತು ಪಾಕಿಸ್ತಾನ ದೇಶದ ನಡುವೆ ಯುದ್ಧ ಸನ್ನಿವೇಶ ನಿರ್ಮಾಣವಾಗಿದೆ. ಈ ಸಾಧ್ಯತೆ ಹಿನ್ನೆಲೆ ಧೀಡಿರನೆ ಸೇನಾಧಿಕಾರಿಗಳಿಂದ ಸೈನಿಕರಿಗೆ ಬುಲಾವ್ ಬಂದಿದೆ. ರಜಾ ಎಂದು ಬಂದ ಸೈನಿಕರನ್ನು ಸೇನೆ ವಾಪಸು ಕರೆಯಿಸಿಕೊಳ್ಳುತ್ತಿದೆ. ರಜೆಕ್ಕೆಂದು ಬಂದಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸೈನಿಕರು ಇಂದು ಮತ್ತೆ ಸೇನೆ ಸೇರಿಕೊಳ್ಳಲು ರೈಲಿನ ಮುಖಾಂತರ ಪಯಣ ಬೆಳೆಸಿದರು.

ಯಾದಗಿರಿ ಜಿಲ್ಲೆಯ ಸುರಪುರ ನಗರದ ನಿವಾಸಿ ರಾಜಮಣಿ ಹಾಗೂ ಮಧ್ಯಪ್ರದೇಶ ಮೂಲದ ರಾಜೇಶ್ ಎನ್ನುವ ಯೋಧ CRSF ತುಕಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಮಣಿ ಕಳೆದ ಎರಡು ದಿನಗಳಿಂದ ಸಂಬಂಧಿ ರಾಜೇಶ್ ನೊಂದಿಗೆ ಯಾದಗಿರಿಗೆ ಬಂದಿದ್ದರು. ದೇಶದ ಪ್ರಮುಖ ನಗರಗಳಲ್ಲಿ  ಹೈ ಅಲರ್ಟ್ ಘೋಷಣೆ ಹಿನ್ನೆಲೆ ಸೇನಾಧಿಕಾರಿಗಳಿಂದ ಬುಲಾವ್ ಬಂದ ಕಾರಣ ಧೀಡಿರನೆ ಬೆಂಗಳೂರಿಗೆ ಪ್ರಯಾಣ ಬೆಳಿಸಿದ್ದಾರೆ.

ಇನ್ನೂ ರಾಜಮಣಿಯ ಹೆಂಡತಿ, ನಾದಿನಿ, ಅಳಿಯ ಎಲ್ಲರೂ ದೇಶದ ಬೆರೆ ಬೆರೆ ಗಡಿಯಲ್ಲಿ BSF, CRSF ತುಕಡಿಯಲ್ಲಿ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ರಾಜಮಣಿ ಹಾಗೂ ರಾಜೇಶ್ ರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣದ ರಕ್ಷಣೆಗೆ ನೇಮಿಸಲಾಗಿದೆ. ಬೆಳಿಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ, ನಮ್ಮ ದೇಶದ ರಕ್ಷಣೆಗಾಗಿ ನಾವು ಎಂಥ ತ್ಯಾಗಕ್ಕೂ ಸಿದ್ಧ ಎಂದು ಸೈನಿಕರು ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಾನು ಲೋಕಸಭೆ ಅಭ್ಯರ್ಥಿ ಅಲ್ಲ ಅಂತ ಸಚಿವ ಪದೇ ಪದೇ ಹೇಳ್ತಿರೋದು ಏಕೆ?