Select Your Language

Notifications

webdunia
webdunia
webdunia
webdunia

ಜನಾರ್ಧನ ರೆಡ್ಡಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿಯೊಂದಿಗೆ ಭೇಟಿ

ಜನಾರ್ಧನ ರೆಡ್ಡಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿಯೊಂದಿಗೆ ಭೇಟಿ
bangalore , ಮಂಗಳವಾರ, 24 ಆಗಸ್ಟ್ 2021 (20:57 IST)
ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ್ದಾರೆ. ಸಂಜೆ ವೇಳೆ ಪತ್ನಿ ಅರುಣಾ ಲಕ್ಷ್ಮೀಯೊಂದಿಗೆ ಆಗಮಿಸಿದ ಜನಾರ್ಧನ ರೆಡ್ಡಿ ಯರನ್ನು ಮಠದ ಅಧಿಕಾರಿಗಳು ಬಾರ ಮಾಡಿಕೊಂಡರು. ಬಳಿಕ ಗ್ರಾಮದ ಆದಿದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡು ಪೂಜೆ ನೇರವೇರಿಸಿದ್ರು. ಇದಾದ ಬಳಿಕ ರಾಯರ ಮೂಲ ಬೃಂದಾವನಕ್ಕೆ ತೆರಳಿ ದರ್ಶನ ಪಡೆದುಕೊಂಡು ವಿಷೇಶ ಪೂಜೆ ನೇರವೇರಿಸಿದ್ರು. ಶ್ರೀರಾಘವೇಂದ್ರ ಸ್ವಾಮಿಗಳ ೩೫೦ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ನಾಲ್ಕನೇಯ ದಿನವಾದ ಇಂದು ರಾಯರ ಮಧ್ಯರಾಧನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪತ್ನಿಯೊಂದಿಗೆ ಶ್ರೀಮಠಕ್ಕೆ ಭೇಟಿ ನೀಡಿದ್ರು. ಶ್ರೀಗಳನ್ನ ಭೇಟಿ ಮಾಡಲು,  ಶ್ರೀಗಳು ಗುರುಕುಲ ತೆರಳಿದ್ದ ಹಿನ್ನೆಲೆಯಲ್ಲಿ‌ ಶ್ರೀಗಳು ಬರುವಿಕೆಗಾಗಿ ಕೆಲಕಾಲ‌ ವಿಐಪಿ ಡೈನಿಂಗ್ ಹಾಲ್ ಬಳಿ ಕಾದು ಕುಳಿತ್ತು ಶ್ರೀಗಳ ಜತೆ ಕೆಲಕಾಲ ಮಾತನಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ" ವಿನೂತನ ಕಾರ್ಯಕ್ರಮ