Publish Date: Fri, 04 Jan 2019 (15:20 IST)
Updated Date: Fri, 04 Jan 2019 (15:25 IST)
ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಸಿದ್ದಗಂಗಾ ಆಸ್ಪತ್ರೆಗೆ ಸಿಎಂ ಭೇಟಿ ನೀಡಿದ್ದಾರೆ.
ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗೆ ಹೂ ಗುಚ್ಚ ನೀಡಿ ಆಸ್ಪತ್ರೆ ವೈದ್ಯರು ಸ್ವಾಗತಿಸಿದರು.
ಸಚಿವ ಎಸ್. ಆರ್. ಶ್ರೀನಿವಾಸ್, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸಿಎಂಗೆ ಸಾಥ್ ನೀಡಿದ್ದರು.
ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ, ಮೂರನೆ ಮಹಡಿ ಸುಸಜ್ಜಿತ ಕೊಠಡಿಯಲ್ಲಿರುವ ಶ್ರೀಗಳನ್ನು ಭೇಟಿ ಮಾಡಿದರು. ನಿನ್ನೆಯಷ್ಟೇ ಮಠದಿಂದ ಶ್ರೀಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.