ಡಯಾಬಿಟೀಸ್ ಜಾಗೃತಿ ಕುರಿತು "ವರ್ಚುವಲ್ ಮ್ಯಾರಥಾನ್" ಆಯೋಜನೆ

Webdunia
ಮಂಗಳವಾರ, 2 ನವೆಂಬರ್ 2021 (19:54 IST)
ಬೆಂಗಳೂರು: ಡಯಾಬಿಟೀಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೇ ನವೆಂಬರ್ 14 ರಿಂದ 20 ರವರೆಗೆ "ಕಾವೇರಿ ಬೆಂಗಳೂರು ರನ್" ಶೀರ್ಷಿಕೆಯ “ವರ್ಚುವಲ್ ಮ್ಯಾರಥಾನ್”ನನ್ನು ಕಾವೇರಿ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದೆ.
 
ಈ ವರ್ಚುವಲ್ ಮ್ಯಾರಥಾನ್ ಕುರಿತು ಮಾಹಿತಿ ನೀಡಿರುವ ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ವಿಜಯ ಭಾಸ್ಕರನ್, ಅಧ್ಯಯನವೊಂದರ ಪ್ರಕಾರ, ನಗರ ಪ್ರದೇಶಗಳಲ್ಲಿ 11.2 ಪ್ರತಿಶತದಷ್ಟು ಜನರು ಮಧುಮೇಹಿಗಳಿದ್ದಾರೆ. ಹೀಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅದರಲ್ಲೂ ಡಯಾಬಿಟೀಸ್ ಬಗ್ಗೆ ಜನರು ಜಾಗೃತಿ ಹೊಂದಿರುವುದು ಅತ್ಯವಶ್ಯಕ. ಈ ದೃಷ್ಟಿಯಿಂದ ಜನಜಾಗೃತಿ ಮ್ಯಾರಥಾನ್ ಆಯೋಜಿಸಲಾಗಿದೆ. ಕೋವಿಡ್ ಸಾಂಕ್ರಮಿಕದ ಕಾರಣ ಈ ಮ್ಯಾರಥಾನ್‌ನನ್ನು ವರ್ಚುವಲ್ ಮೂಲಕ ನಡೆಸಲಾಗುತ್ತಿದೆ ಎಂದರು.
 
ಕಾವೇರಿ ಆಸ್ಪತ್ರೆ ನಿರ್ದೇಶಕ ವಿಲ್ಫ್ರೆಡ್ ಸ್ಯಾಮ್ಸನ್ ಮಾತನಾಡಿ, ನ. 14ರಿಂದ ಒಂದು ವಾರಗಳ ಕಾಲ ಈ ವರ್ಚುವಲ್ ಮ್ಯಾರಥಾನ್ ನಡೆಯಲಿದೆ. ಆಸಕ್ತರು http://www.kauverybangalorerun.com ವೆಬ್‌ಸೈಟ್‌ನಲ್ಲಿ ನೋಂದಾಯಿಸಿ ಕೊಳ್ಳಬಹುದು. ಈ ಮ್ಯಾರಥಾನ್ ನಾಲ್ಕು ವಿಭಾಗದಲ್ಲಿ ನಡೆಸಲಾಗುತ್ತಿದೆ. 21.1k., 1k, 10k, 5k ಹಾಗೂ 2k ವಿಭಾಗದಲ್ಲಿ ಓಟ ಇರಲಿದೆ. ಪ್ರತಿ ವಿಭಾಗದಲ್ಲಿ ಗೆದ್ದ ಮೂವರಿಗೆ ಪ್ರಶಸ್ತಿ ನೀಡಲಾಗುವುದು. ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ಪದಕವನ್ನು ವಿತರಿಸಲಾಗುತ್ತದೆ. ಭಾಗವಹಿಸಲು ಇಚ್ಚಿಸುವವರು ಸಮಯ ಹಾಗೂ ಕಿ.ಮೀನನ್ನು ಟ್ರ್ಯಾಕ್ ಮಾಡುವ ಟ್ರ್ಯಾಕಿಂಗ್ ಅಪ್ಲಿಕೇಷನ್‌ನನ್ನು ಡೌಲ್‌ಲೋಡ್ ಮಾಡಿಕೊಳ್ಳಬೇಕು.
ನೀವು ಯಾವ ವಿಭಾಗದ ಓಟದಲ್ಲಿ ಪಾಲ್ಗೊಂಡಿದ್ದೀರಿ ಎಂದು ಕಿ.ಮೀ ಹಾಗೂ ಫೋಟೋವನ್ನು http://www.kauverybangalorerun.com ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬಹುದು. ವಿಜೇತರಿಗೆ ಕಾವೇರಿ ಆಸ್ಪತ್ರೆ ತಂಡವರು ಕರೆ ಮಾಡಿ ಪ್ರಶಸ್ತಿ ವಿತರಿಸಲಿದೆ.
 
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಪವನ್ ಕುಮಾರ್: ಮೊ: 9535238141 | ಇಮೇಲ್: pavankumar@kauveryhospital.com ಅಥವಾ www.kauverybangalorerun.com ಗೆ ಭೇಟಿ ನೀಡಿ
dabitas

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದುವೆ ಇಷ್ಟವಿಲ್ಲ ಎನ್ನುವುದಕ್ಕಿಂತ ಸಾಯಿಸೋದು ಸುಲಭ ಅನಿಸಿತಂತೆ: ಸಿಯಾ ಗೋಯಲ್ ಮಾತು ಕೇಳಿದ್ರೆ ಶಾಕ್ ಆಗ್ತೀರಿ

ಬಿಡದಿಗೆ ಸಿಎಂ ಬರಬಹುದು ಎಂದು ಕಾಯುತ್ತಾ ಕೂತೆ.. ಆದರೆ ಬರಲೇ ಇಲ್ಲ..: ಎಚ್ ಡಿ ಕುಮಾರಸ್ವಾಮಿ

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ: ಕಾರಿನ ಮೇಲೆ ನಿಂತು ತೋಳು ತಟ್ಟಿ, ಮೀಸೆ ತಿರುವಿದ ಪ್ರದೀಪ್ ಈಶ್ವರ್ Video

ಡ್ಯಾನ್ಸ್ ಮಾಡಿಕೊಂಡು ಈಜುಕೊಳಕ್ಕೆ ಧುಮುಕಿದವನು ಸಾವನ್ನಪ್ಪಿದ್ದು ಹೇಗೆ: ಲೈವ್ ವಿಡಿಯೋ ವೈರಲ್

ಕೇತನ್ ಅಗರ್ವಾಲ್ ಪ್ರಾಣವೇ ಹೋದ ಮೇಲೆ ಸಿಯಾ ಗೋಯಲ್ ಸಹೋದರ ಹೀಗೆ ಹೇಳೋದಾ

ಮುಂದಿನ ಸುದ್ದಿ
Show comments