Select Your Language

Notifications

webdunia
webdunia
webdunia
webdunia

ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ವಿಧಾ​ನ​ಸೌಧ ಇವರ ಅಪ್ಪನ ಮನೆಯ? -ಹಿರಿಯ ಸಾಹಿತಿ ಕುಂ.ವೀ​ರ​ಭ​ದ್ರಪ್ಪ

ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ವಿಧಾ​ನ​ಸೌಧ ಇವರ ಅಪ್ಪನ ಮನೆಯ? -ಹಿರಿಯ ಸಾಹಿತಿ ಕುಂ.ವೀ​ರ​ಭ​ದ್ರಪ್ಪ
ಧಾರವಾಡ , ಗುರುವಾರ, 4 ಅಕ್ಟೋಬರ್ 2018 (13:09 IST)
ಧಾರವಾಡ : ರಾಜ​ಕಾ​ರಣ ಬರೀ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ​ನಂಥವ​ರಿಗೆ ಮಾತ್ರ ಸೀಮಿ​ತ​ವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ಎಂದು ಕುಟುಂಬ ರಾಜ​ಕಾ​ರ​ಣದ ವಿರುದ್ಧ ಹಿರಿಯ ಸಾಹಿತಿ ಕುಂ.ವೀ​ರ​ಭ​ದ್ರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕರ್ನಾಟಕ ನವ ನಿರ್ಮಾಣ ಸೇನೆ ಧಾರ​ವಾ​ಡ​ದಲ್ಲಿ ಬುಧ​ವಾರ ಆಯೋ​ಜಿ​ಸಿದ್ದ ಪ್ರತ್ಯೇಕ ರಾಜ್ಯ​ಅ​ಧಿ​ಕಾ​ರಕ್ಕೋ ಅಥವಾ ಅಭಿ​ವೃ​ದ್ಧಿಗೋ ವಿಷಯ ಕುರಿತು ವಿಚಾರ ಸಂಕಿ​ರ​ಣ​ದಲ್ಲಿ ಮಾತ​ನಾ​ಡಿದ ಅವರು,’ ರಾಜ​ಕಾ​ರಣ ಬರೀ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ​ನಂಥವ​ರಿಗೆ ಮಾತ್ರ ಸೀಮಿ​ತ​ವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ಅವರೇ ಎಂಎಲ್‌ಎ ಆಗಬೇಕಾ? ವಿಧಾ​ನ​ಸೌಧ ಇವರ ಅಪ್ಪನ ಮನೆಯ’ ಎಂದು ಟೀಕಿಸಿದ್ದಾರೆ.


‘ಎಲ್ಲ ಪಕ್ಷದ ರಾಜಕಾರಣಿಗಳೂ ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮುನ್ನಡೆಸಲು ಯತ್ನಿಸುತ್ತಿದ್ದಾರೆ. ವಿಧಾ​ನ​ಸೌ​ಧ​ದಲ್ಲಿ ನೀವೇ ತುಂಬಿ​ಕೊಂಡಿ​ರ​ಬೇ​ಕಾ? ನಾವೂ ಚುನಾ​ವ​ಣೆಗೆ ನಿಲ್ಲ​ಬೇಕು, ನಾವೂ ಎಂಎ​ಲ್‌ಎ ಆಗ​ಬೇ​ಕೆಂಬ ಆಸೆ ಯುವ​ಕ​ರಿ​ಗಿದ್ದು ಇದನ್ನು ಪ್ರಶ್ನಿ​ಸುವ ಗುಣ​ ಬೆಳೆ​ಸಿ​ಕೊಳ್ಳಬೇ​ಕು. ದೇಶದ ದೊಡ್ಡಶಕ್ತಿ ಯುವ​ಕ​ರಾ​ಗಿದ್ದು, ರಾಜ್ಯದ ಭವಿಷ್ಯ ರೂಪಿ​ಸುವಲ್ಲಿ ಪಣ​ತೊಡಿ ಎಂದು ಹೇಳುವುದರ ಮೂಲಕ ಅವರು ರಾಜ್ಯದ ಯುವಕರನ್ನು ಹುರಿದುಂಬಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಕಾಂಗ್ರೆಸ್​ ಸಚಿವರಿಗಾಗಿ ಏರ್ಪಡಿಸಿದ ಉಪಹಾರ ಕೂಟದಲ್ಲಿ ಸಿದ್ದರಾಮಯ್ಯನವರಿಗಿಲ್ಲವಂತೆ ಆಹ್ವಾನ!