Publish Date: Wed, 16 Jan 2019 (15:50 IST)
Updated Date: Wed, 16 Jan 2019 (15:52 IST)
ಪ್ರಸಾದಕ್ಕಾಗಿ ಬಂದ ಭಕ್ತರ ಮೇಲೆ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ.
ಚಾಮರಾಜನಗರದ ಹುಲುಗಿನ ಮುರಡಿಯ ವೆಂಕಟರಮಣ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ರಥೋತ್ಸವದ ನಂತರ ಪ್ರಸಾದಕ್ಕಾಗಿ ಬಂದ ಭಕ್ತರ ಜತೆ ಗಲಾಟೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ದೇವಸ್ಥಾನದ ಸಂಬಂಧಿಕರಿಂದ ದುರ್ವರ್ತನೆಯೂ ನಡೆದಿದೆ ಎಂದು ಭಕ್ತರು ದೂರಿದ್ದಾರೆ.
ದೇವಸ್ಥಾನದ ಅರ್ಚಕರ ಸಂಬಂಧಿಕರು ಮೃಗಗಳಂತೆ ಭಕ್ತರನ್ನ ಎಳೆದೆಳೆದು ಬಿಸಾಡಿದ ಘಟನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವರ ಪ್ರಸಾದಕ್ಕಾಗಿ ಮುಗಿಬಿದ್ದ ಭಕ್ತರ ಮೇಲೆ ರಫ್ ಅಂಡ್ ಟಫ್ ಆಗಿ ಅರ್ಚಕರ ಸಂಬಂಧಿಕರು ನಡೆದುಕೊಂಡಿದ್ದಾರೆ.
ಪಕ್ಕದಲ್ಲೇ ಪೊಲೀಸ್ ಸಿಬ್ಬಂದಿ ಇದ್ದರೂ ಸಹ, ಅರ್ಚಕರ ಸಂಬಂಧಿಗಳು ರೌಡಿಗಳಂತೆ ವರ್ತಿಸಿದರು ಎಂದು ಜನರು ದೂರಿದ್ದಾರೆ.