Publish Date: Fri, 19 May 2023 (13:50 IST)
Updated Date: Fri, 19 May 2023 (13:48 IST)
ಜನರು ಕರೆಂಟ್ ಬಿಲ್ ಕಾಂಗ್ರೆಸ್ನವರನ್ನೆ ಕೇಳಿ ಎನ್ನುತ್ತಿದ್ದಾರೆ. ಕಾಂಗ್ರೆಸ್ಗೆ ಬಹುಮತ ಸಿಕ್ಕ ಹಿನ್ನೆಲೆ ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಎಂದು ಜನರು ಹೇಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದಲ್ಲಿ ಜನರು ಬಿಲ್ ಪಾವತಿ ಮಾಡಿಸಿಕೊಳ್ಳಲು ಬಂದ ಕೆಇಬಿ ಬಿಲ್ ಕಲೆಕ್ಟರ್ನನ್ನೇ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ಬಿಲ್ ತಗೆದುಕೋ ನಾವು ಬಿಲ್ ಕಟ್ಟಲ್ಲ. ಬೇಕಾದರೆ ನಿನ್ನ ಆಫೀಸರ್ ಬಳಿ ಹೋಗಿ ಹೇಳು” ಎಂದು ಜನರು ಹೇಳುತ್ತಿದ್ದು “ಗ್ರಾಮದಲ್ಲಿ ಯಾರ ಮನೆಗೂ ಹೋಗಿ ಬಿಲ್ ಕೇಳಬೇಡ. ಕಮರ್ಷಿಯಲ್ ಮೀಟರ್ ಗೆ ಮಾತ್ರ ಬಿಲ್ ಕೇಳು ಮನೆಗಳ ತಂಟೆಗೆ ಬರಬೇಡ” ಎಂದು ಬಿಲ್ ಕಲೆಕ್ಟರ್ಗೆ ಜನರು ಕ್ಲಾಸ್ ಕೂಡ ತಗೆದುಕೊಂಡಿದ್ದಾರೆ. ಇಷ್ಟು ನಡೆದು ಬಿಲ್ ಕಲೆಕ್ಟರ್ರನ್ನು ಗ್ರಾಮದಿಂದ ಗ್ರಾಮಸ್ಥರು ಹೊರ ಕಳಿಸಿದ್ದಾರೆ.