Select Your Language

Notifications

webdunia
webdunia
webdunia
webdunia

ನೆರೆ ಪರಿಹಾರದಲ್ಲಿ ಅನ್ಯಾಯ ಖಂಡಿಸಿ ಬೀಗ ಜಡಿದ ಸಂತ್ರಸ್ತರು

ನೆರೆ ಪರಿಹಾರದಲ್ಲಿ ಅನ್ಯಾಯ ಖಂಡಿಸಿ ಬೀಗ ಜಡಿದ ಸಂತ್ರಸ್ತರು
ಚಿಕ್ಕೋಡಿ , ಸೋಮವಾರ, 14 ಅಕ್ಟೋಬರ್ 2019 (15:57 IST)
ನೆರೆ ಪರಿಹಾರ ವಿಷಯವಾಗಿ ಗರಂ ಆದ ಸಂತ್ರಸ್ತರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ನೆರೆ ಪರಿಹಾರ ಸರ್ವೇಯಲ್ಲಿ ತಾರತಮ್ಯ ಮಾಡಿರೋದನ್ನು ಖಂಡಿಸಿ ಪ್ರತಿಭಟನೆ ನಡೆದಿದೆ.

ಚಿಕ್ಕೋಡಿಯ ಸಪ್ತಸಾಗರ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ ಪ್ರವಾಹ ಸಂತ್ರಸ್ತರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನೂರಾರು ಸಂತ್ರಸ್ತರಿಂದ ಪ್ರತಿಭಟನೆ ನಡೆದಿದೆ.

ಸರ್ವೇ ಕಾರ್ಯ ಸಂದರ್ಭದಲ್ಲಿ ಕೆಲವರ ಹೆಸರು ನಾಪತ್ತೆಯಾಗಿವೆ ಹಾಗೂ ಕೆಲವರ ವಿರುದ್ಧ ತಾರತಮ್ಯ ಧೋರಣೆ ತಳೆಯಲಾಗಿದೆ.

ಈ ವಿಷಯದಲ್ಲಿ ಪಂಚಾಯತಿ ಅಧಿಕಾರಿಗಳು ಮತ್ತು ಸಂತ್ರಸ್ತರ ಮಧ್ಯೆ ವಾಗ್ವಾದ ನಡೆಯಿತು.
ಗಲಾಟೆ ನಡೆದರೂ ಕಚೇರಿಗೆ ಪಂಚಾಯತಿ ಅಧ್ಯಕ್ಷ ಭರತೇಶ ಸಂಕ್ರಟ್ಟಿ ಆಗಮಿಸಲೇ ಇಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ಕಚೇರಿ ಮುಂದೆ ಕಾಂಗ್ರೆಸ್ ಮಾಡಿದ್ದೇನು?