Select Your Language

Notifications

webdunia
webdunia
webdunia
webdunia

ಪಕ್ಷದ ಸಂಸದರಿಗೇ ಘೇರಾವ್ ಹಾಕಿ ಬೆವರಿಳಿಸಿದ ಬಿಜೆಪಿ ಮುಖಂಡರು

ಪಕ್ಷದ ಸಂಸದರಿಗೇ ಘೇರಾವ್ ಹಾಕಿ ಬೆವರಿಳಿಸಿದ ಬಿಜೆಪಿ ಮುಖಂಡರು
ಬೆಳಗಾವಿ , ಶನಿವಾರ, 12 ಅಕ್ಟೋಬರ್ 2019 (18:31 IST)
ಬಿಜೆಪಿ ಸಂಸದರೊಬ್ಬರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೇ ಘೇರಾವ್ ಹಾಕಿರೋ ಘಟನೆ ನಡೆದಿದೆ.

ಪ್ರವಾಹ ಪರಿಹಾರ ನೀಡದ ಕೇಂದ್ರ ಸರಕಾರದ ವಿರುದ್ಧ ಮಾತನಾಡದೇ, ಇಲ್ಲಿಗೆ ಬಂದು ಪಾದಯಾತ್ರೆ ಮಾಡುತ್ತಿದ್ದೀರಾ? ಮೊದಲು ಗಟ್ಟಿ ಧ್ವನಿ ಮಾಡಿ ಪರಿಹಾರ ತನ್ನಿ. ಆ ಮೇಲೆ ಪಾದಯಾತ್ರೆ ಮಾಡಿ. ಹೀಗಂತ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.

ಹುದಲಿ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿಯರ ಜನ್ಮ ದಿನಾಚರಣೆ ಅಂಗವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯವರಿಗೆ ಬಿಜೆಪಿ ಕಾರ್ಯಕರ್ತರು ತರಾಟೆಗೆ ತಗೆದುಕೊಂಡರು. ಸಂತ್ರಸ್ತರಿಗೆ ಪರಿಹಾರ ನೀಡಿದ ಕೇಂದ್ರ ಸರಕಾರದ ವಿರುದ್ಧ ಮಾತನಾಡದ ಸಂಸದರು, ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಮೊದಲು ಸಂತ್ರಸ್ತರಿಗೆ ಸ್ಪಂದಿಸಿ, ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಹ ಹಾಗೂ ಭೀಕರ ಮಳೆಯಿಂದ ಮನೆ - ಮಠ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರದಿಂದ ಹಣ ಪಡೆಯುವುದು ಸಂಸದರ ಕೆಲಸ. ಆದರೆ ನಮ್ಮ ಸಂಸದರು ಕೇಂದ್ರದ ಹತ್ತಿರ ಮಾತನಾಡುತ್ತಿಲ್ಲ. ಪರಿಹಾರ ತರದಿದ್ದರೆ ಅವರು ರಾಜೀನಾಮೆ ನೀಡಲಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಗೋಕಾಕ್ ನಲ್ಲಿ ಸರ್ವಾಧಿಕಾರ ಕೊನೆಗಾಣಿಸುವೆ ಎಂದ ಅಶೋಕ: ಜಾರಕಿಹೊಳಿಗೆ ತಲೆನೋವು