Webdunia - Bharat's app for daily news and videos

Install App

ಯಾರಿಗೋಸ್ಕರ ಬಂದ್ ಮಾಡಬೇಕು ಅನಿಸ್ತಿದೆ, ಹೋಟೆಲ್ ನವರಿಗೆ ದುರಹಂಕಾರ: ವಾಟಾಳ್ ನಾಗರಾಜ್

Krishnaveni K
ಶನಿವಾರ, 22 ಮಾರ್ಚ್ 2025 (11:32 IST)
ಬೆಂಗಳೂರು: ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ಬಂದಿರುವುದಕ್ಕೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್ ನವರಿಗೆ ದರಹಂಕಾರ ಎಂದಿದ್ದಾರೆ.
 

ಇಂದಿನ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋ, ಬಸ್ ಎಂದಿನಂತೆ ಓಡಾಡುತ್ತಿದ್ದರೆ, ಅಂಗಡಿ ಮಾಲಿಕರೂ ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾರೆ. ಹೋಟೆಲ್ ಗಳೂ ತೆರೆದಿವೆ.

ಈಗಾಗಲೇ ಹೋಟೆಲ್ ಮಾಲಿಕರು ನಾವು ಬಂದ್ ಮಾಡಲ್ಲ, ನೈತಿಕ ಬೆಂಬಲವಷ್ಟೇ ನೀಡುತ್ತೇವೆ ಎಂದಿದ್ದರು. ಇದಕ್ಕೆ ವಾಟಾಳ್ ನಾಗರಾಜ್ ಇಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನೈತಿಕ ಬೆಂಬಲ ಎಂದರೆ ಅರ್ಥ ಏನು? ಯಾರಿಗೆ ಬೇಕ್ರೀ ನಿಮ್ಮ ನೈತಿಕತೆ? ಹೋಟೆಲ್ ನವರಿಗೆ ದರಹಂಕಾರ. ಹೋಟೆಲ್ ನವರಿಗೆ, ಅಂಗಡಿಯವರಿಗೆ ಮುಚ್ಚಬೇಡಿ ಎಂದು ಪೊಲೀಸರ ಕೈಯಲ್ಲೇ ಹೇಳಿಸಿದ್ದಾರೆ.

ಇದನ್ನೆಲ್ಲಾ ನೋಡುವಾಗ ಯಾರಿಗೋಸ್ಕರ ಚಳವಳಿ ಮಾಡಬೇಕು? ಯಾತಕ್ಕೋಸ್ಕರ ಮಾಡಬೇಕು ಎನಿಸುತ್ತದೆ. ಆದ್ರೂ ಬಂದ್ ಯಶಸ್ವಿಯಾಗಿದೆ. ಇದಕ್ಕೆ ಸಹಕಾರ ಕೊಟ್ಟ ಸಂಘ, ಸಂಸ್ಥೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments