Publish Date: Sat, 27 May 2023 (20:31 IST)
Updated Date: Sat, 27 May 2023 (19:15 IST)
ಸಚಿವ ಸ್ಥಾನ ಸಿಗದ ವಿಚಾರಕ್ಕೆ ಅದು ಮುಖ್ಯಮಂತ್ರಿಗಳ ಪರಮಾಧಿಕಾರ .ಪದ್ದತಿ ಸಂಪ್ರದಾಯ ಇತ್ತು, ಮೇಲ್ಮನೆ ವಿಪಕ್ಷ ನಾಯಕರು ಸಭಾನಾಯಕರನ್ನ ಮಾಡೊದು ಸಂಪ್ರದಾಯ.ಆ ಸಂಪ್ರದಾಯ ಮುರಿದಿದ್ದಾರೆ, ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ ಅಲ್ಲದೆ ರಾಜೀನಾಮೆ ಕೊಡ್ತೀನಿ ಎಂದು ನಾನು ಎಲ್ಲೂ ಹೇಳಿಲ್ಲ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಪರಿಷತ್ ನಲ್ಲಿ ಸಭಾನಾಯಕರನ್ನ ಯಾರನ್ನ ಮಾಡಬೇಕೆಂದು ಸಿಎಂ ಅವರನ್ನ ಡಿಸಿಎಂ ಶಿವಕುಮಾರ್ ಅವರನ್ನ ಕೇಳಿ.ನಾನು ಪರಿಷತ್ ನಲ್ಲಿ ಸಾಮಾನ್ಯ ಸದಸ್ಯನಾಗಿರ್ತೇನೆ.ಎಲ್ಲಿಯವರೆಗೂ ಇರು ಅಂತಾರೊ, ಅಲ್ಲಿಯವರೆಗೂ ನಾನು ಇರ್ತಿನಿ.ಹಿಂಬಾಲಕರಿಗೆ ಮಾತ್ರ ಅವಕಾಶನಾ ಎಂಬ ವಿಚಾರಕ್ಕೂ ಪ್ರತಿಕ್ರಿಯಿಸಿದ್ದು,ಪಕ್ಷದಲ್ಲಿ ನಾನಾ ರೀತಿಯ ವಿಚಾರ ನಡೆಯುತ್ತಿರುತ್ತೆ.ಕಾಲ ಬಂದಾಗ ಅದನೆಲ್ಲ ಹೇಳ್ತೀನಿ ಎಂದು ತಮ್ಮ ಅಸಮಾಧಾನವನ್ನ ಬಿ.ಕೆ.ಹರಿಪ್ರಸಾದ್ ಹೊರಹಾಕಿದ್ದಾರೆ.