Select Your Language

Notifications

webdunia
webdunia
webdunia
webdunia

ಬಂಡಾಯಗಾರರೊಂದಿಗೆ ನಾನಿಲ್ಲ ಎಂದ ಉಮೇಶ್ ಜಾಧವ

ಬಂಡಾಯಗಾರರೊಂದಿಗೆ ನಾನಿಲ್ಲ ಎಂದ ಉಮೇಶ್ ಜಾಧವ
ಕಲಬುರಗಿ , ಬುಧವಾರ, 13 ಫೆಬ್ರವರಿ 2019 (12:03 IST)
ಕಾಂಗ್ರೆಸ್ ನ ಬಂಡಾಯಗಾರರೊಂದಿಗೆ ನಾನು ಇಲ್ಲ. ಅಲ್ಲದೇ ನಾನು ಮುಂಬೈಗೂ ಹೋಗಿಲ್ಲ. ಹೀಗಂತ ಕೈ ಪಾಳೆಯದ ಶಾಸಕ ಉಮೇಶ ಜಾಧವ ಯು ಟರ್ನ್​ ಹೊಡೆದಿದ್ದಾರೆ.

ನಾನು ಗೊಂದಲದಲ್ಲಿದ್ದೇನೆ. ರಾಜೀನಾಮೆ ನೀಡುವ ಕುರಿತು ನಿರ್ಣಯ ಕೈಗೊಂಡಿಲ್ಲ. ಜನರ ಅಭಿಪ್ರಾಯ ಪಡೆದು ಮುಂದುವರೆಯುತ್ತೇನೆ ಎಂದಿದ್ದಾರೆ.

ನನಗೆ ಯಾರ ಜೊತೆಗೆ ಯಾವ ಸಮಸ್ಯೆಯೂ ಆಗಿಲ್ಲ. ಯಾವುದೇ ತಪ್ಪು ನಮ್ಮಿಂದ ಆಗಿದ್ರೆ ಶಿಕ್ಷೆಗೆ ಒಳಪಡಲು ಸಿದ್ಧ. ಸ್ಥಳೀಯವಾಗಿ ಒಂದಷ್ಟು ಸಮಸ್ಯೆಗಳಿವೆ. ಸಿದ್ದರಾಮಯ್ಯ ನಮ್ಮ ನಾಯಕರು ಎಂದ ಅವರು, ಬಿಜೆಪಿ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ತಮಗೆ ಸ್ನೇಹಿತರಿದ್ದಾರೆ ಎಂದಿದ್ದಾರೆ. ನಾನು ಕ್ಷೇತ್ರದಲ್ಲೇ ಇದ್ದೇನೆ. ಎಲ್ಲೂ ಹೋಗಿಲ್ಲ. ವಿಪ್ ಕೊಟ್ಟಿದ್ದಾರೆ.

ಅದಕ್ಕೆ ಹಾಜರಾಗಿದ್ದೇನೆ. ಈ ಹಿಂದೆ ಗೈರು ಹಾಜರಾಗಿದ್ದಕ್ಕೆ ಸ್ಪೀಕರ್ ಗೆ ಮಾಹಿತಿ ನೀಡಿದ್ದೇನೆ. ಹೀಗಂತ ಕಲಬುರಗಿ ಜಿಲ್ಲೆಯ ಚಿಂಚೋಳಿ ಶಾಸಕ ಉಮೇಶ ಜಾಧವ್ ಹೇಳಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಪರಿಸ್ಥಿತಿಯನ್ನು ರೇಪ್‍ಗೆ ಒಳಗಾದವರ ಪರಿಸ್ಥಿತಿಗೆ ಹೋಲಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡ್ರಾ ಸ್ಪೀಕರ್?