Select Your Language

Notifications

webdunia
webdunia
webdunia
webdunia

ಉಮಾಶ್ರೀಗೆ ಸೈಕಲ್ ಹೇಳಿಕೊಟ್ಟ ಕಾರ್ಯಕರ್ತರು!

ಉಮಾಶ್ರೀಗೆ ಸೈಕಲ್ ಹೇಳಿಕೊಟ್ಟ ಕಾರ್ಯಕರ್ತರು!
bangalore , ಗುರುವಾರ, 8 ಜುಲೈ 2021 (13:58 IST)
ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀಗೆ ಸೈಕಲ್ ಹೊಡೆಯುವುದನ್ನು ಕಾರ್ಯಕರ್ತರು ಕಲಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸೈಕಲ್ ಜಾಥಾ ಪ್ರತಿಭಟನೆ ನಡೆಸಿದರು.
ತೈಲ ಬೆಲೆ ಹಾಗೂ ದಿನ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವೆ ಉಮಾಶ್ರೀ ಸೈಕಲ್ ಜಾಥಾ ಮಾಡುವ ಮೂಲಕ ವಿನೂತನವಾಗಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. 
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ತೇರದಾಳ ಮತ್ತ ಕ್ಷೇತ್ರದಲ್ಲಿ ವಿವಿಧ ಬೀದಿಯಲ್ಲಿ ನಗರದ  ಸೈಕಲ್ ಜಾಥಾ ನಡೆಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಹೊಡೆತಕ್ಕೆ ತತ್ತರಿಸಿರುವ ಸಾರ್ವಜನಿಕರ ಮೇಲೆ ತೈಲ ಬೆಲೆ ಹಾಗೂ ದಿನನಿತ್ಯ ವಸ್ತುಗಳ ಬೆಲೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಏರಿಕೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರ ತೈಲ ಬೆಲೆ ಇಳಿಕೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಮಾಜಿ ಸಚಿವೆ ಉಮಾಶ್ರೀ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ?