Select Your Language

Notifications

webdunia
webdunia
webdunia
webdunia

ಬಜೆಟ್ ನಲ್ಲಿ ಕರಾವಳಿಗೆ ಅನ್ಯಾಯ : ಉಡುಪಿ ಶಾಸಕ ರಘುಪತಿ ಭಟ್

ಬಜೆಟ್ ನಲ್ಲಿ ಕರಾವಳಿಗೆ ಅನ್ಯಾಯ : ಉಡುಪಿ ಶಾಸಕ ರಘುಪತಿ ಭಟ್
ಉಡುಪಿ , ಗುರುವಾರ, 5 ಜುಲೈ 2018 (17:02 IST)
ಮುಖ್ಯ ಮಂತ್ರಿ ಮಂಡಿಸಿದ ಬಜೆಟ್ ನಿರಾಶದಾಯಕವಾಗಿದ್ದು ಕಳೆದ 15 ವರ್ಷಗಳಲ್ಲಿ ಮಂಡನೆಯಾದ ಬಜೆಟ್‍ಗಳ ಪೈಕಿ ಈ ಬಜೆಟ್  ಅತ್ಯಂತ ಕೆಟ್ಟ  ಬಜೆಟ್ ಎಂದು ಉಡುಪಿ ಶಾಸಕ  ರಘುಪತಿ ಭಟ್  ಅಭಿಮತ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನಲ್ಲಿ ಬಜೆಟ್ ಮಂಡನೆಯಾದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ.

ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಬಜೆಟ್‍ನಲ್ಲಿ ಯಾವುದೇ ಯೋಜನೆ ಕಲ್ಪಿಸಿಲ್ಲ. ಕೇವಲ ತನ್ನ ಪಕ್ಷದ ಅಭ್ಯರ್ಥಿಗಳ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಿದ್ದಾರೆ. ಈ ಬಜೆಟ್ ಕೇವಲ 3 ಜಿಲ್ಲೆಗಳಿಗೆ ಸೀಮಿತವಾಗಿದೆ. ವಿಶೇಷವಾಗಿ ಕರಾವಳಿ 
ಭಾಗದ ಮೀನುಗಾರರಿಗೆ ಯಾವುದೇ ಯೋಜನೆ ನೀಡಿಲ್ಲ. ರೈತ ಸಾಲಮನ್ನಾ ಕೂಡಾ ಅಸಮರ್ಪಕವಾಗಿದೆ.
ಉಡುಪಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

ಠೇವಣಿ ಕಳೆದುಕೊಂಡಿರುವ ಕಾರಣಕ್ಕಾಗಿ ಬಜೆಟ್‍ನ ಮೂಲಕ ಕುಮಾರಸ್ವಾಮಿ 
ಕರಾವಳಿ ಜನತೆಯೊಂದಿಗೆ ಸೇಡು ತೀರಿಸಿಕೊಂಡಿದ್ದಾರೆ. ಹೀಗಾಗಿ ಈ ಬಜೆಟ್‍ಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದ್ರು. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಪುಟಾಣಿಯ ಕೃಷಿಪ್ರೇಮ: ಸಾರ್ವಜನಿಕರಿಂದ ಮೆಚ್ಚುಗೆ