Select Your Language

Notifications

webdunia
webdunia
webdunia
webdunia

ಉದಯಗಿರಿ ಠಾಣೆ ಮೇಲೆ ಕಲ್ಲೆಸೆತ ಪ್ರಕರಣ: ಅರೆಸ್ಟ್ ಆದ 8 ಮಂದಿ ಇವರೇ

Udayagiri police station stone pelting case, Chief Minister Siddaramaiah, Udayagiri Police Station

Sampriya

ಮೈಸೂರು , ಬುಧವಾರ, 12 ಫೆಬ್ರವರಿ 2025 (18:51 IST)
ಮೈಸೂರು: ಇಲ್ಲಿನ ಉದಯಗಿರಿ ಠಾಣೆಗೆ ಕಲ್ಲೆಸೆದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು 8ಮಂದಿಯನ್ನು ಬಂಧಿಸಿದ್ದಾರೆ.  

ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಶಾಂತಿನಗರದ ಸುಹೇಲ್‌, ರಹೀಲ್‌, ಅಯಾನ್‌, ಗೌಸಿಯಾ ನಗರದ ಸೈಯದ್‌ ಸಾದಿಕ್‌, ಶೋಹೇಬ್‌ ಪಾಷಾ, ರಾಜೀವ್‌ ನಗರದ ಸಾದಿಕ್‌ ಪಾಷಾ, ಅರ್ಬಾಜ್‌ ಷರೀಫ್‌, ಸತ್ಯನಗರದ ಎಜಾಜ್‌ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಠಾಣೆಯ ಸುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳ ಹತ್ತಕ್ಕೂ ಹೆಚ್ಚು ಡಿವಿಆರ್‌ಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಇದೀಗ ನಗರ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಉಳಿದ ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.

ಭದ್ರತೆಯ ದೃಷ್ಟಿಯಿಂದ ಮಹದೇವಪುರ ರಸ್ತೆಯ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ ತೆರವುಗೊಳಿಸಲಾಗಿದ್ದು, ವಾಹನ ಓಡಾಟಕ್ಕೆ ಮುಕ್ತ ಅವಕಾಶ ಒದಗಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸರ್ಕಾರ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದೆ: ಆರ್‌ ಅಶೋಕ್‌