Webdunia - Bharat's app for daily news and videos

Install App

ಆನೆ ದಾಳಿಗೆ ಇಬ್ಬರು ಮಹಿಳೆಯರ ಸಾವು

geetha
ಭಾನುವಾರ, 18 ಫೆಬ್ರವರಿ 2024 (18:00 IST)
ತಮಿಳುನಾಡು :ಇಂದು ಬೆಳಗ್ಗೆ ಕಾಡಿನತ್ತ ಹೋಗಿದ್ದ ದನಗಳನ್ನು ಅಟ್ಟಲು ಇಬ್ಬರೂ ಮಹಿಳೆಯರು ತೆರಳಿದ್ದರು. ಆ ವೇಳೆ ಒಂಟಿ ಸಲಗವೊಂದು ಕಾಡಿನಲ್ಲಿ ಪ್ರತ್ಯಕ್ಷವಾಗಿತ್ತು. ಭಯಭೀತರಾಗಿದ್ದ ಮಹಿಳೆಯರು ಓಡುವಾಗ ಅಟ್ಟಿಸಿಕೊಂಡು ಬಂದ ಆನೆ ಕಾಲ್ತುಳಿತದಿಂದಾಗಿ ಇಬ್ಬರೂ ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾಡಾನೆ ದಾಳಿಗೆ ಇಬ್ಬರು ದನಗಾಹಿ ಮಹಿಳೆಯರು ದಾರುಣವಾಗಿ ಮೃತಪಟ್ಟಿರುವ ಘಟನೆ ಕರ್ನಾಟಕ -ತಮಿಳುನಾಡು ಗಡಿ ಪ್ರದೇಶವಾದ ತಳಿ ಅರಣ್ಯಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ವಸಂತಮ್ಮ (37) ಹಾಗೂ ಅನ್ನಿಯಾಳಮ್ಮ (45) ಮೃತ ದುರ್ದೈವಿಗಳು. ದಾಳಿಯಲ್ಲಿ ಎರಡು ಹಸುಗಳೂ ಸಹ ಮೃತಪಟ್ಟಿವೆ. 

ನಿನ್ನೆಯಷ್ಟೇ ಒಂಟಿ ಸಲಗವೊಂದು ಡೆಂಕಣಿಕೋಟೆಯ ಬಳಿ ಸುಳಿದಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಆ ಆನೆಯೇ ಇಂದು ಮಹಿಳೆಯರ ಮೇಲೆ ದಾಳಿ ನಡೆಸಿದೆ. ಇದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರವಣವೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. 
 
ಆದರೆ ನಿನ್ನೆ ಡೆಂಕಣಿಕೋಟೆಯಲ್ಲಿ ಕಾಣಿಸಿಕೊಂಡ ಆನೆ ಅರಣ್ಯಕ್ಕೆ ವಾಪಸಾಗಿದೆ. ಇದು ಬೇರೆಯದೇ ಆನೆ ಎಂದು ವಾದಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆಯ ಮೇಲೆ ಹಾಗೂ ಮುಂಜಾನೆಯ ಸಮಯದಲ್ಲಿ ಅರಣ್ಯಪ್ರದೇಶಕ್ಕೆ ತೆರಳದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gun firing on Mutthappa Rai son Ricky rai:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ

Karnataka Weather: ಇಂದು ಮಳೆ ಈ ಜಿಲ್ಲೆಯವರಿಗೆ ಮಾತ್ರ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments