Webdunia - Bharat's app for daily news and videos

Install App

ಆನೆ ದಾಳಿಗೆ ಇಬ್ಬರು ಮಹಿಳೆಯರ ಸಾವು

geetha
ಭಾನುವಾರ, 18 ಫೆಬ್ರವರಿ 2024 (18:00 IST)
ತಮಿಳುನಾಡು :ಇಂದು ಬೆಳಗ್ಗೆ ಕಾಡಿನತ್ತ ಹೋಗಿದ್ದ ದನಗಳನ್ನು ಅಟ್ಟಲು ಇಬ್ಬರೂ ಮಹಿಳೆಯರು ತೆರಳಿದ್ದರು. ಆ ವೇಳೆ ಒಂಟಿ ಸಲಗವೊಂದು ಕಾಡಿನಲ್ಲಿ ಪ್ರತ್ಯಕ್ಷವಾಗಿತ್ತು. ಭಯಭೀತರಾಗಿದ್ದ ಮಹಿಳೆಯರು ಓಡುವಾಗ ಅಟ್ಟಿಸಿಕೊಂಡು ಬಂದ ಆನೆ ಕಾಲ್ತುಳಿತದಿಂದಾಗಿ ಇಬ್ಬರೂ ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾಡಾನೆ ದಾಳಿಗೆ ಇಬ್ಬರು ದನಗಾಹಿ ಮಹಿಳೆಯರು ದಾರುಣವಾಗಿ ಮೃತಪಟ್ಟಿರುವ ಘಟನೆ ಕರ್ನಾಟಕ -ತಮಿಳುನಾಡು ಗಡಿ ಪ್ರದೇಶವಾದ ತಳಿ ಅರಣ್ಯಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ವಸಂತಮ್ಮ (37) ಹಾಗೂ ಅನ್ನಿಯಾಳಮ್ಮ (45) ಮೃತ ದುರ್ದೈವಿಗಳು. ದಾಳಿಯಲ್ಲಿ ಎರಡು ಹಸುಗಳೂ ಸಹ ಮೃತಪಟ್ಟಿವೆ. 

ನಿನ್ನೆಯಷ್ಟೇ ಒಂಟಿ ಸಲಗವೊಂದು ಡೆಂಕಣಿಕೋಟೆಯ ಬಳಿ ಸುಳಿದಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಆ ಆನೆಯೇ ಇಂದು ಮಹಿಳೆಯರ ಮೇಲೆ ದಾಳಿ ನಡೆಸಿದೆ. ಇದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರವಣವೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. 
 
ಆದರೆ ನಿನ್ನೆ ಡೆಂಕಣಿಕೋಟೆಯಲ್ಲಿ ಕಾಣಿಸಿಕೊಂಡ ಆನೆ ಅರಣ್ಯಕ್ಕೆ ವಾಪಸಾಗಿದೆ. ಇದು ಬೇರೆಯದೇ ಆನೆ ಎಂದು ವಾದಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆಯ ಮೇಲೆ ಹಾಗೂ ಮುಂಜಾನೆಯ ಸಮಯದಲ್ಲಿ ಅರಣ್ಯಪ್ರದೇಶಕ್ಕೆ ತೆರಳದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments