Select Your Language

Notifications

webdunia
webdunia
webdunia
webdunia

ಚಂದ್ರು ಕೊಲೆ ಪ್ರಕರಣ ರೋಚಕ ಟ್ವಿಸ್ಟ್

Corona
ಬೆಂಗಳೂರು , ಶನಿವಾರ, 9 ಏಪ್ರಿಲ್ 2022 (15:29 IST)
ಜೆಜೆ ನಗರದಲ್ಲಿ ಇತ್ತೀಚೆಗೆ ನಡೆದ ದಲಿತ ಯುವಕ ಚಂದ್ರು ಹತ್ಯೆ ಪ್ರಕರಣದ ಕುರಿತು ಸ್ನೇಹಿತ ಸೈಮನ್‌ ಸ್ಫೋಟಕ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಲಭಿಸಿದೆ.
 
ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಎಂಬಾತನನ್ನು ದುಷ್ಕರ್ಮಿಗಳು ಚಾಕುವಿನಿಂದ ತೊಡೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದರು.
ಉರ್ದು ಬರಲ್ಲ ಅಂತ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ, ನಂತರ ಬೈಕ್‌ ಟಚ್‌ ಆಗಿದ್ದರಿಂದ ಕೊಲೆ ಆಗಿತ್ತು ಎಂದು ಹೇಳಿಕೆ ಬದಲಿಸಿದ್ದರು. ಅಲ್ಲದೇ ಇದೇ ರೀತಿಯ ಹೇಳಿಕೆಯನ್ನು ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ನೀಡಿದ್ದರು.
 
ಅರಗ ಜ್ಞಾನೇಂದ್ರ ಅವರ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಕೊಲೆಯಾದ ಚಂದ್ರುವನ್ನು ಉರ್ದು ಬರಲ್ಲ. ,ಬರೀ ಕನ್ನಡ ಮಾತನಾಡ್ತಾನೆ ಅಂತಾನೆ ಕೊಲೆ ಮಾಡಲಾಗಿದೆ ಎಂದು ಸ್ನೇಹಿತ ಸೈಮನ್‌ ಹೇಳಿಕೆ ನೀಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ನಾಳೆ ಮಾಂಸ ಮಾರಾಟಕ್ಕೆ ಬ್ರೇಕ್