Select Your Language

Notifications

webdunia
webdunia
webdunia
webdunia

ಫೋಟೋ ವಿವಾದದ ಬೆನ್ನಲ್ಲೇ TTD ಸ್ಪಷ್ಟನೆ

ಫೋಟೋ ವಿವಾದದ ಬೆನ್ನಲ್ಲೇ TTD ಸ್ಪಷ್ಟನೆ
bangalore , ಮಂಗಳವಾರ, 10 ಮೇ 2022 (19:56 IST)
ತಿರುಮಲಕ್ಕೆ ಕರ್ನಾಟಕದಿಂದ ತೆರಳಿದ್ದ ವಾಹನಗಳ ಮೇಲಿದ್ದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಫೋಟೋಗಳನ್ನು ತಿರುಮಲ- ತಿರುಪತಿ ದೇವಸ್ಥಾನ ಮಂಡಳಿ ಸಿಬ್ಬಂದಿ ತೆಗೆಸಿದ್ದು ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಈ ಕುರಿತು ಟಿಟಿಡಿ ಸ್ಪಷ್ಟನೆ ನೀಡಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಯಾವುದೇ ಧರ್ಮದ ಚಿಹ್ನೆ, ದೇವರು, ವ್ಯಕ್ತಿ, ರಾಜಕೀಯ ನಾಯಕರ ಫೋಟೋ, ಪಕ್ಷದ ಧ್ವಜದಂತಹ ವಸ್ತುಗಳನ್ನು ತರುವಂತಿಲ್ಲ ಎಂದು ಹೇಳಿದೆ..ತಿರುಮಲ ಪ್ರವೇಶಕ್ಕೂ ಮುನ್ನ ಅಲಿಪಿರಿಯಲ್ಲಿ ವಾಹನ ತಪಾಸಣೆ ನಡೆಸುವ ಸಿಬ್ಬಂದಿ ಈ ನಿಯಮವನ್ನು ವಾಹನಗಳಲ್ಲಿ ಇರುವವರಿಗೆ ತಿಳಿಸುತ್ತಾರೆ. ಸ್ಟಿಕ್ಕರ್‌ ಹಾಗೂ ಧ್ವಜಗಳು TTD ನಿಯಮಗಳಿಗೆ ವಿರುದ್ಧವಾಗಿರೋದ್ರಿಂದ ಅವನ್ನು ತೆಗೆಯಲು ಸೂಚನೆ ನೀಡುತ್ತಾರೆ. ಹೀಗಾಗಿ ದೇಗುಲದ ಈ ಮಹತ್ವದ ನಿಯಂತ್ರಣವನ್ನು ಭಕ್ತಾದಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಆಡಳಿತ ಮಂಡಳಿ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ತಾಜ್‌ಮಹಲ್‌ನಲ್ಲಿ ಬೀಗ ಹಾಕಿರುವ ಕೊಠಡಿ ತೆರೆಸಿ’