Select Your Language

Notifications

webdunia
webdunia
webdunia
webdunia

ನಿಜವಾದ ಪ್ರೀತಿ, ಗೋಮಾಂಸ ತಿನ್ನಿಸಿ, ಬೂರ್ಖಾ ಧರಿಸುತ್ತಿರಲಿಲ್ಲ: ಎಸ್‌ಡಿಪಿಐ ನಿಷೇಧಕ್ಕೆ ಮುತಾಲಿಕ್ ಒತ್ತಾಯ

ಶ್ರೀರಾಮಸೇನೆ ನಾಯಕ ಪರಮೋದ್ ಮುತಾಲಿಕ್

Sampriya

ಹುಬ್ಬಳ್ಳಿ , ಭಾನುವಾರ, 1 ಜೂನ್ 2025 (16:49 IST)
ಹುಬ್ಬಳ್ಳಿ: ಕೇರಳದಿಂದ ಮಂಗಳೂರಿಗೆ ಬರುವ ವ್ಯಕ್ತಿಗಳು ಗಲಭೆ ಮಾಡಿ, ಕೊಲೆಗೆ ಪ್ರಚೋದನೆ ನೀಡುತ್ತ ದಾಂಧಲೆ ಮಾಡುತ್ತಿದ್ದಾರೆ. ಈ ಸಂಬಂದ ರಾಜ್ಯ ಸರ್ಕಾರವು  ಪಿಎಫ್‌ಐ ಸಂಘಟನೆ ನಿಷೇಧಿಸಿದಂತೆ, ಎಸ್‌ಡಿಪಿಐ ಪಕ್ಷವನ್ನು ನಿಷೇಧಿಸಬೇಕು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಆಗ್ರಹಿಸಿದರು.

ನಗರದ ಕ್ಯೂಬಿಕ್ಸ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀರಾಮ ಸೇನೆಯ ‘ಲವ್ ಜಿಹಾದ್ ವಿರುದ್ಧ 24/7 ಕಾರ್ಯ ನಿರ್ವಹಿಸಿದ ಸಹಾಯವಾಣಿ’ಯ ಪ್ರಥಮ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಸ್ಲಿಮ್‌ ಮತಾಂಧರು ಲವ್‌ ಜಿಹಾದ್‌ ಮೂಲಕ ಹಿಂದೂ ಹುಡುಗಿಯರನ್ನು ಯಾಮಾರಿಸುತ್ತಿದ್ದಾರೆ. ಅವರು ನಿಜವಾಗಿ ಪ್ರೀತಿ ಮದುವೆಯಾಗಿದ್ದರೆ ಅವರನ್ನು ಗೋಮಾಂಸ ತಿನ್ನುವಂತೆ, ಬೂರ್ಖಾ ಧರಿಸುವಂತೆ ಯಾಕೆ ಒತ್ತಡ ಹೇರುತ್ತಿದ್ದರು.

ಪ್ರೀತಿಗೆ ವಿರೋಧವಿಲ್ಲ ಆದರೆ ಪ್ರೀತಿ ಹೆಸರಲ್ಲಿ ನಡೆಯುತ್ತಿರುವ ಕಪಟತನ, ಧರ್ಮ ವಿರೋಧಿ ಹಾಗೂ ದೇಶದ್ರೋಹಿ ಕಾರ್ಯದ ವಿರುದ್ಧ ಸಮರ ಸಾರುತ್ತಿದ್ದೇವೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

Covid 19: ದೇಶದಲ್ಲಿ ದಿಢೀರನೇ ಏರಿಕೆ ಕಂಡ ಕೋವಿಡ್ ಪ್ರಕರಣಗಳು, ರಾಜ್ಯವಾರು ಇಲ್ಲಿದೆ