Select Your Language

Notifications

webdunia
webdunia
webdunia
webdunia

ರೋಡಿಗಿಳಿದು ಅಧಿಕಾರಿಗಳಲ್ಲಿ ವಿಶೇಷ ಮನವಿ ಮಾಡಿದ ಅನಿರುದ್ಧ್‌, ನಟನ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆ

ನಟ ಅನಿರುದ್ಧ್ ಜಟ್ಕರ್

Sampriya

ಬೆಂಗಳೂರು , ಬುಧವಾರ, 28 ಮೇ 2025 (19:53 IST)
Photo Credit X
ಬೆಂಗಳೂರು: ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸುವಂತೆ ನಟ ಅನಿರುದ್ಧ್ ಅವರು ವಿಶೇಷವಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯ ದುಸ್ಥಿತಿಯನ್ನು ನಟರಾದ ಅನಿರುದ್ಧ್‌ ಅವರು ಗ್ರೌಂಡ್‌ ಲೆವೆಲ್‌ಗೆ ಇಳಿದು ವಿಡಿಯೋ ರೀಪೋರ್ಟ್ ಮಾಡಿದ್ದಾರೆ.  ಇದನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯ ದುಸ್ಥಿತಿಯನ್ನು ನಟರಾದ ಅನಿರುದ್ಧ್ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಇಲ್ಲಿ ಪೆಟ್ರೋಲ್ ಬಂಕ್‌, ಟಿವಿಎಸ್‌ ಶೋ ರೂಂ ಇದೆ. ಈ ರಸ್ತೆಯನ್ನು ಗಮನಿಸಿದಾಗ ತುಂಬಾನೇ ಹದಗೆಟ್ಟಿದೆ. ಮೂರರಿಂದ ನಾಲ್ಕು ಕಿಲೋ ಮೀಟರ್ ಇದೇ ರೀತಿಯ ರಸ್ತೆಯನ್ನು ಕಾಣಬಹುದು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.

ನಟನ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.





Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ವಿವಾದದ ಬೆನ್ನಲ್ಲೇ ರಾಜ್ಯಸಭೆಯತ್ತ ಕಮಲ್‌ ಹಾಸನ್‌: ಅಭ್ಯರ್ಥಿ ಘೋಷಿಸಿದ ಮಕ್ಕಳ್ ನೀಧಿ ಮಯ್ಯಂ