Select Your Language

Notifications

webdunia
webdunia
webdunia
webdunia

ಹಿಂದೂ ಯುವಕರಿಗೆ ತ್ರಿಶೂಲ ದೀಕ್ಷೆ

ಹಿಂದೂ ಯುವಕರಿಗೆ ತ್ರಿಶೂಲ ದೀಕ್ಷೆ
bangalore , ಸೋಮವಾರ, 16 ಮೇ 2022 (18:55 IST)
ಇಸ್ಲಾಮೀಕರಣಕ್ಕೆ ಸೆಡ್ಡು ಹೊಡೆಯಲು ಭಜರಂಗದಳದವರು ಕೊಡಗಿನಲ್ಲಿ ಶೌರ್ಯ ಪ್ರಶಿಕ್ಷಣ ವರ್ಗ ಹೆಸರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿದ್ದಾರೆ. ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಈ ತರಬೇತಿ ನೀಡಲಾಗಿದೆ. ಹಿಂದೂ ಕಾರ್ಯಕರ್ತರಿಗೆ ತ್ರಿಶೂಲ ನೀಡಿ, ಬಂದೂಕು ತರಬೇತಿ ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್, ಭಜರಂಗದಳದ ದಕ್ಷಿಣ ಪ್ರಾಂತ್ಯದ ವತಿಯಿಂದ ಈ ಕಾರ್ಯಕ್ರಮ ನಡೆದಿದೆ. ಭಯೋತ್ಪಾದನೆಗೆ ತರಬೇತಿ ನೀಡಲಾಗುತ್ತಿದೆ ಎಂದು SDPI ಆರೋಪ ಮಾಡಿದೆ. ಆದರೆ ತೀವ್ರವಾದಿ ಸಂಘಟನೆಯಾದ SDPI ನಡೆಸುವ ಅಪರಾಧ ಕೃತ್ಯದ ವೇಳೆ ಆತ್ಮರಕ್ಷಣೆಗೆ ಈ ತರಬೇತಿ ನೀಡಲಾಗಿದೆ ಎಂದು ಭಜರಂಗದಳ ಸಮರ್ಥನೆ ಮಾಡಿಕೊಂಡಿದೆ. ಈಗಾಗಲೇ ಬೆಂಗಳೂರಿನ ಡಿಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ಮುಸ್ಲಿಂರು ದಾಂಧಲೆ ಮಾಡಿದ್ದಾರೆ. ಅಂತ ಸಮಯದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳಲು ಈ ತರಬೇತಿ ನೀಡಲಾಗಿದೆ ಎಂದು ಭಜರಂಗದಳವು ಸ್ಪಷ್ಟಪಡಿಸಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ರಕ್ತದಲ್ಲಿ ಪತ್ರ ಬರೆದ PSI ಅಭ್ಯರ್ಥಿಗಳು