Publish Date: Thu, 14 Dec 2017 (06:59 IST)
Updated Date: Thu, 14 Dec 2017 (07:23 IST)
ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗೆರವಳ್ಳಿ ಕೊಲೆಗೆ ಸುಪಾರಿ ಪ್ರಕರಣದ ಹಿನ್ನೆಲೆ ಮಧ್ಯಂತರ ಜಾಮೀನಿನ ಮೂಲಕ ಜಯದೇವ ಆಸ್ಪತ್ರೆಯಲ್ಲಿ ಇರುವ ಪತ್ರಕರ್ತ ರವಿ ಬೆಳಗೆರೆಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.
ಮಧುಮೇಹ, ಬಿ.ಪಿ, ಹೃದಯ ಸಂಬಂಧಿ ಕಾಯಿಲೆಯ ಹಿನ್ನೆಲೆ ಜಯದೇವ ಆಸ್ಪತ್ರೆಯ ಡಿಲೆಕ್ಸ್ ವಾರ್ಡ್ ನಲ್ಲಿ ರವಿ ಬೆಳಗೆರೆಗೆ ಇಬ್ಬರು ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ರವಿ ಬೆಳಗೆರೆ ಭದ್ರತೆಗಾಗಿ ಇಬ್ಬರು ಪೇದೆಗಳ ನಿಯೋಜನೆಯನ್ನು ಕೂಡ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ