Webdunia - Bharat's app for daily news and videos

Install App

ಮೈಸೂರಿಗೆ ಆಕಾಶದಲ್ಲಿ ಹೋಗ್ತಿರಾ? ಪ್ರತಾಪ್ ಸಿಂಹಗೆ ಸುಮಲತಾ ತಿರುಗೇಟು

Webdunia
ಗುರುವಾರ, 19 ಆಗಸ್ಟ್ 2021 (17:31 IST)
ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ತಮ್ಮದು
ಎಂದು ಹೇಳಿಕೊಳ್ಳುತ್ತಾರೆ. ಮಂಡ್ಯ ರೈತರು ಭೂಮಿ ಕೊಡದೇ ಮೇಲಿನಿಂದ ಹಾರಿ ಹೋಗ್ತಿರಾ ಎಂದು ಸಂಸದ ಪ್ರತಾಪ್ ಸಿಂಹಗೆ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ದಶಪಥ ರಸ್ತೆ ಮೈಸೂರಿನದ್ದು, ಅದರ ಕ್ರೆಡಿಟ್ ಮಂಡ್ಯ, ರಾಮನಗರದವರು ತಮ್ಮದೆಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ ಜನರನ್ನು ಲೆಕ್ಕಿಸದೇ ಮೈಸೂರು ಎನ್ನುವುದನ್ನು ನಾನು ಒಪ್ಪಲಾರೆ. ಬೆಂಗಳೂರಿನಿಂದ ಮೈಸೂರಿಗೆ ಹೇಗೆ ಹೋಗ್ತಾರೆ? ಆಕಾಶದಲ್ಲಿ ಹಾರಿಕೊಂಡು ಹೋಗ್ತಾರಾ? ಮಂಡ್ಯ ಇಲ್ಲದೇ ಮೈಸೂರು ಇಲ್ಲ. ಅವರು ತಮ್ಮ ಕ್ಷೇತ್ರದ ಇತಿಮಿತಿಯಲ್ಲಿ ಮಾತನಾಡಬೇಕು ಎಂದರು.
ಇದೇ ವೇಳೆ ಸುಮಲತಾ ತಮ್ಮ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜೆಡಿಎಸ್ ಶಾಸಕ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕ್ರಿಮಿನಲ್ ಗಳೇ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಹೇಳುವುದು ಹಾಸ್ಯಸ್ಪದ ಎಂದು ಲೇವಡಿ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮೆರಿಕಾಗೆ ತೆರಳಲು ಅನುಮತಿ ನೀಡದ ಕೇಂದ್ರ: ಬಂದ್ಮೇಲೆ ಎಲ್ಲಾ ಹೇಳ್ತೀನಿ ಎಂದ ಪ್ರಿಯಾಂಕ್ ಖರ್ಗೆ

ಇರಾನ್ ಮೇಲೆ ಮತ್ತೆ ಇಸ್ರೇಲ್ ಭೀಕರ ದಾಳಿ: ಖಮೇನಿಗೂ ಸದ್ದಾಂ ಹುಸೇನ್ ಗತಿಯಾಗುತ್ತಾ

ರಾಜ ರಘುವಂಶಿ ಗತಿ ನನಗಾಗಲಿಲ್ಲ.. ದೇವರೇ ಕಾಪಾಡಿದ..

Karnataka Weather: ಈ ಒಂದು ಜಿಲ್ಲೆಗೆ ಮಾತ್ರ ಇಂದು ಭಾರೀ ಮಳೆ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಮುಂದಿನ ಸುದ್ದಿ
Show comments