Webdunia - Bharat's app for daily news and videos

Install App

ಟೊಮೆಟೊ ಗ್ಯಾಸ್, ಹಾಲು ದೀನಸಿ ಆಯ್ತು ಇದೀಗ ಹೋಟೆಲ್‌ಗಳ ಸರದಿ

Webdunia
ಬುಧವಾರ, 26 ಜುಲೈ 2023 (18:05 IST)
ಕಳೆದ ಕೆಲ ದಿನಗಳಿಂದ ದಿನಬಳಕೆ ಪದಾರ್ಥಗಳ ಬೆಲೆ ದಿನದಿಂದ ಗಗನಕ್ಕೆ ಏರುತ್ತಿವೆ. ಹೀಗಾಗಿ ಜನಸಾಮಾನ್ಯರಿಗೆ ಮಾತ್ರವಲ್ಲದೆ ಕೆಲವೊಂದು ಉದ್ಯಮಗಳಿಗೂ ಕೂಡ ಇದರ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ದುನಿಯಾ ತುಂಬಾ ಕಾಸ್ಟ್ಲಿಯಾಗುತ್ತಿದ್ದು, ಇದರ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಊಟ ತಿಂಡಿ, ಕಾಫಿ ಟೀ ಬೆಲೆಯೂ ಏರಿಸುವುದಕ್ಕೆ ಮೂಹೂರ್ತ ಫಿಕ್ಸ ಆಗಿದೆ. ಇದೇ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಹೋಟೆಲ್ ಊಟ, ತಿಂಡಿಗಳ ದರ ಏರಿಕೆಗೆ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.

ಬೆಂಗಳೂರಲ್ಲಿ ನಡೆದ ಹೋಟೆಲ್ ಮಾಲೀಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು. ಹೋಟೆಲ್ ಊಟ, ತಿಂಡಿಗಳ ಮೇಲೆ ಶೇ. 10ರಷ್ಟು ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಹಾಲು, ಅಗತ್ಯ ವಸ್ತುಗಳ ಬೆಲೆಯ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ದಗ ಏರಿಕೆಗೆ ಹೊಟೇಲ್ ಮಾಲೀಕರ ಸಂಘ ನಿರ್ಧರಿಸಿದ್ದು, ಆಗಸ್ಟ್ 1 ನೇ ತಾರೀಖಿನಿಂದ ಬೆಲೆ ಹೆಚ್ಚಳವಾಗಲಿದೆ. ಈಗಾಗಲೇ ದರ ಹೆಚ್ಚಿಸಿರೋ ಹೋಟೆಲ್‌ಗಳಲ್ಲಿ ಮತ್ತೆ ದರ ಹೆಚ್ಚಳ ಇರುವುದಿಲ್ಲ. ಕೇವಲ ಶೇಕಡಾ 10ರಷ್ಟು ಮಾತ್ರ ಬೆಲೆ ಹೆಚ್ಚಿಸಬೇಕು ಅಂತ ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಕಾಫಿ ಹಾಗೂ ಟೀ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ, ತಿಂಡಿ‌ ತಿನಿಸುಗಳ ಬೆಲೆ 5ರಿಂದ 10 ರೂಪಾಯಿ‌ಗಳಷ್ಟು ಏರಿಕೆಯಾಗಲಿದೆ. ಊಟದ ದರ 10 ರೂಪಾಯಿ‌ ಏರಿಕೆಯಾಗಲಿದೆ ಇದಕ್ಕೆ ಗ್ರಾಹಕರು ಸಹಕರಿಸಬೇಕು. ಇಲ್ಲವಾದರೆ ಹೊಟೇಲ್ ಉದ್ಯಮ ನಡೆಸೊದು ಕಸ್ಟವಾಗುತ್ತದೆ ಎಂದು ಬೆಂಗಳೂರು ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಪಿ,ಸಿ ರಾವ್ ತೀಳಿಸಿದ್ದಾರೆ.

ಏರಿಕೆಯಾಗಲಿರುವ ತಿಂಡಿಗಳ ದರಪಟ್ಟಿ
ಆಹಾರಗಳು ಈಗಿನ ದರ      ಎಷ್ಟು ರೂಪಾಯಿ ಏರಲಿದೆ?
ರೈಸ್ ಬಾತ್ 40         -      45
ಇಡ್ಲಿ (ಎರಡಕ್ಕೆ)30-40   -    40-50
ಸೆಟ್ ದೋಸೆ 60         -     65
ಬೆಣ್ಣೆ ಮಸಾಲೆ ದೋಸೆ 70   -    80
ಚೌಚೌ ಬಾತ್ 40-50 -     50-60
ಪೂರಿ 50-60        -      55-65
ಮಿನಿ ಮೀಲ್ಸ್ 60-65   -    70-75
ಅನ್ನ-ಸಾಂಬಾರ್ 40-50   -    50-60
ಕರ್ಡ್ ರೈಸ್ 40-45 -         45-55
ಚಪಾತಿ (ಎರಡಕ್ಕೆ) 40-45     - 50-60
ಬಿಸಿಬೇಳೆ ಬಾತ್ 40-45    - 45-55
ಬಾದಾಮಿ ಹಾಲು 15   -        18
ಕಾಫಿ-ಟೀ 12-15 15-18 

ನೋಡಿದ್ರಲ್ಲ ವೀಕ್ಷಕರೇ ಇನ್ನು ಮುಂದೆ ಹೋಟೆಲ್ ಳಲ್ಲಿ ಈ ಎಲ್ಲದರ ಮೇಲೆ ನಿಮಗೆ ಐದರಿಂದ ಹತ್ತು ರೂಪಾಯಿ ದರ ಹೆಚ್ಚಳವಾಗಲಿದ್ದು, ಇನ್ನೂ ಮುಂದೆ ನಿಮಗೆ  ಹೋಟೆಲ್ ಗಳಲ್ಲಿ ಹೋದರೆ ನಿಮ್ಮ ಜೆಬಿಗೆ ಕತ್ತರಿ ಬಿಳೊದು ಗ್ಯಾರಂಟಿ.ಅದೇನೇ ಇರಲಿ ದಿನದಿಂದ ದಿನಕ್ಕೆ ದರ ಹೆಚ್ಚಳ ಆಗ್ತಾ ಇರೋದ್ರಿಂದ ಜನಸಾಮಾನ್ಯರಂತೂ ಕಂಗಾಲಾಗಿದ್ದು, ಸರ್ಕಾರದ ವಿರುದ್ಧ ಜನಸಾಮಾನ್ಯರು ಹಿಡೀ ಶಾಪ ಹಾಕುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೆಳತಿ ಆಟವಾಡಲು ಸೈಕಲ್ ನೀಡಿಲ್ಲವೆಂದು ಆತ್ಮಹತ್ಯೆಗೆ ಶರಣಾದ 11ರ ಬಾಲಕಿ

ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದ ವಿನಯ್ ನರ್ವಾಲ್‌ ಪತ್ನಿಗೆ ಮತ್ತಷ್ಟು ನೋವು ತಂದುಕೊಟ್ಟ ವೈರಲ್ ವಿಡಿಯೋ

ಯಪ್ಪಾ ಈತ ಯಾವ ಸೀಮೆಯ ಡಾಕ್ಟರ್‌, ನಾಯಿಯನ್ನು ಮಹಡಿಯಿಂದ ಎಸೆದು ಅದರ ನರಳಾಟ ನೋಡುವುದೇ ವೈದ್ಯನಿಗೆ ಖುಷಿ

ಪಾಕ್‌ನ ಹೆಡೆಮುರಿ ಕಟ್ಟಬಹುದು, ಆದ್ರೆ ಕಾಂಗ್ರೆಸ್‌ನ ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ‌: ಅಶೋಕ್‌

ಕರ್ನಾಟಕದಲ್ಲಿರುವ ಎಲ್ಲಾ ಪಾಕಿಸ್ತಾನ ಪ್ರಜೆಗಳಿಗೂ ಗೇಟ್ ಪಾಸ್: ಜಿ ಪರಮೇಶ್ವರ್

ಮುಂದಿನ ಸುದ್ದಿ
Show comments