Select Your Language

Notifications

webdunia
webdunia
webdunia
webdunia

ನಾಮಪತ್ರ ವಾಪಸ್​ಗೆ ಇಂದೇ ಕೊನೆಯ ದಿನ

ನಾಮಪತ್ರ ವಾಪಸ್​ಗೆ ಇಂದೇ ಕೊನೆಯ ದಿನ
bangalore , ಸೋಮವಾರ, 24 ಏಪ್ರಿಲ್ 2023 (19:00 IST)
ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ಇಂದು ಕೊನೆಯ ದಿನವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಬಂಡಾಯಕೋರರಾಗಿ ಕಣಕ್ಕೆ ಇಳಿದಿರುವ ನಾಯಕರನ್ನು ಮನವೊಲಿಸಿ ನಾಮಪತ್ರ ಹಿಂದೆಗೆದುಕೊಳ್ಳುವಂತೆ ಮಾಡಲು ನಾಯಕರು ಪ್ರಯತ್ನ ನಡೆಸಿದ್ದಾರೆ. ಇಂದು 3 ಗಂಟೆತನಕ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದೆ.. ರಾಜಕೀಯ ಪಕ್ಷಗಳು ಟಿಕೆಟ್ ವಂಚಿತರಿಂದ ಬಂಡಾಯ ಎದುರಿಸುತ್ತಿದ್ದು, ಅವರನ್ನು ಮನವೊಲಿಸಲು ಸಂಧಾನ ಮಾಡಲಾಗ್ತಿದೆ. ನಾಯಕರ ಸಂಧಾನ ಸಫಲವಾಗಿದ್ಯಾ ಎಂಬುದು ಇಂದು ತಿಳಿಯಲಿದೆ. ಇನ್ನು ಬಂಡಾಯಗಾರರ ಮನವೊಲಿಸುವಲ್ಲಿ ಬಿಜೆಪಿ ಸಕ್ಸಸ್​ ಆಗಿದ್ದು, ಶೇ.‌80ರಿಂದ 90ರಷ್ಟು ಜನರು ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ ಎಂದು ದಾವಣಗೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿಗೆ ಸಿಎಂ ಬೊಮ್ಮಾಯಿ ತಿರುಗೇಟು