Select Your Language

Notifications

webdunia
webdunia
webdunia
webdunia

ಕಾವೇರಿ ನಾಲೆಗೆ ನೀರು ಬಿಡುವಂತೆ ಒತ್ತಾಯಿಸಿ ಸಚಿವರ ಕಾಲಿಗೆ ಬಿದ್ದ ರೈತರು

ಮಂಡ್ಯ
ಮಂಡ್ಯ , ಸೋಮವಾರ, 7 ನವೆಂಬರ್ 2016 (13:15 IST)
ಕಾವೇರಿ ಜಲಾನಯನ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿರುವುದರಿಂದ ಕೂಡಲೇ ನಾಲೆಗಳಿಗೆ ನೀರು ಬಿಡಬೇಕು ಎಂದು ರೈತರು ಸಚಿವರ ಕಾಲಿಗೆ ಬಿದ್ದ ಬೇಡಿಕೊಂಡ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
 
ಮಂಡ್ಯ ಜಿಲ್ಲೆ ಮುದ್ದೂರು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವ ಎಂ.ಕೃಷ್ಣಪ್ಪ ಅವರಲ್ಲಿ ತಮ್ಮ ಕಷ್ಟ ತೋಡಿಕೊಂಡ ರೈತರು ದಯಮಾಡಿ ನಾಲೆಗಳಿಗೆ ನೀರು ಬಿಡಿ. ಇಲ್ಲದಿದ್ದರೆ ಸಂಪೂರ್ಣ ಬೆಳೆ ನಾಶವಾಗುತ್ತದೆ ಎಂದು ಕೋರಿದ್ದಾರೆ.
 
ರೈತರ ಬೇಡಿಕೆಗಳಿಗೆ ಮಣಿದ ಸಚಿವ ಎಂ.ಕೃಷ್ಣಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ನಾಲೆಗಳಿಗೆ ನೀರು ಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
 
ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ನೀರು ಹರಿಸುತ್ತೇನೆ. ಆತಂಕಪಡುವುದು ಬೇಡ ಎಂದು ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಆಶ್ವಾಸನೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶೋಭಾ ಕರಂದ್ಲಾಜೆ ಬಿಜೆಪಿಯಲ್ಲಿರುವ ಕೆಟ್ಟ ಹುಳ, ಬಾಯಿ ಬೊಂಬಾಯಿ : ವಿ.ಎಸ್.ಉಗ್ರಪ್ಪ