Select Your Language

Notifications

webdunia
webdunia
webdunia
webdunia

ಶೋಭಾ ಕರಂದ್ಲಾಜೆ ಬಿಜೆಪಿಯಲ್ಲಿರುವ ಕೆಟ್ಟ ಹುಳ, ಬಾಯಿ ಬೊಂಬಾಯಿ : ವಿ.ಎಸ್.ಉಗ್ರಪ್ಪ

ಶೋಭಾ ಕರಂದ್ಲಾಜೆ
ಬೆಂಗಳೂರು , ಸೋಮವಾರ, 7 ನವೆಂಬರ್ 2016 (13:02 IST)
ಶೋಭಾ ಕರಂದ್ಲಾಜೆ ಬಿಜೆಪಿಯಲ್ಲಿರುವ ಕೆಟ್ಟ ಹುಳ, ಬಾಯಿ ಬೊಂಬಾಯಿ ಆಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿ ಪಕ್ಷ ಒಡೆಯಲು ಶೋಭಾ ಕರಂದ್ಲಾಜೆ ನೇರ ಕಾರಣವಾಗಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಲ್ಲಿರುವ ಭಿನ್ನಮತಕ್ಕೆ ಕರಂದ್ಲಾಜೆ ನೇರ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
 
ಕರಂದ್ಲಾಜೆ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ ಅವರ ಬಾಯಿ ಬೊಂಬಾಯಿಯಾಗಿದೆ. ಬಿಎಸ್‌ವೈ ಪತ್ನಿ ಮತ್ತು ರಘುಪತಿ ಭಟ್ ಪತ್ನಿಯ ಅಸಹಜ ಸಾವಿನ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಬಿಜೆಪಿ ನಾಯಕರಿಗೆ ಸರಕಾರದ ವಿರುದ್ಧ ಮಾಡಲು ಯಾವುದೇ ಆರೋಪಗಳಿಲ್ಲವಾದ್ದರಿಂದ ಅನಗತ್ಯವಾಗಿ ವಿವಾದ ಸೃಷ್ಟಿಸಲು ಕರಂದ್ಲಾಜೆ ಸಂಚು ರೂಪಿಸುತ್ತಿದ್ದಾರೆ. ಆದರೆ. ರಾಜ್ಯದ ಜನತೆಗೆ ಅವರ ಬಂಡವಾಳ ಗೊತ್ತಿದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರುದ್ರೇಶ್ ಹತ್ಯೆಯಲ್ಲಿ ಶೋಭಾ ಕರಂದ್ಲಾಜೆ ಕೈವಾಡವಿದೆ ಎಂದು ಹೇಳೋಕಾಗುತ್ತಾ?: ಸಿಎಂ ಸಿದ್ದರಾಮಯ್ಯ