Select Your Language

Notifications

webdunia
webdunia
webdunia
webdunia

ಟಯರ್ ಪಂಚರ್ ಆದ ಕಾರು ಟ್ಯಾಂಕರ್ ಗೆ ಡಿಕ್ಕಿ: ಇಬ್ಬರು ಮಹಿಳಾ ಇಂಜಿನಿಯರ್ ಸಾವು

ಟಯರ್ ಪಂಚರ್ ಆದ ಕಾರು ಟ್ಯಾಂಕರ್ ಗೆ ಡಿಕ್ಕಿ: ಇಬ್ಬರು ಮಹಿಳಾ ಇಂಜಿನಿಯರ್ ಸಾವು
bangalore , ಭಾನುವಾರ, 19 ಜೂನ್ 2022 (19:44 IST)
ಕಾರಿನ ಟಯರ್ ಪಂಚರ್ ಆಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಕಾರು ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಇಂಜಿನಿಯರ್ ಮೃತಪಟ್ಟ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.
ಮೈಸೂರು ಮತ್ತು ಹುಣಸೂರು ಹೆದ್ದಾರಿಯ ರಂಗಯ್ಯನ ಕೊಪ್ಪಲು ಗೇಟ್ ಬಳಿ ಹಾಲಿನ ಟ್ಯಾಂಕರ್ ಗೆ ಕಾರು ಡಿಕ್ಕಿ ಹೊಡೆದಿದೆ.
ವೀಕೆಂಡ್ ಪಾರ್ಟಿಗೆ ಹೋಗುತ್ತಿದ್ದ ಮೈಸೂರಿನ ಜೀವಿತಾ ಮತ್ತು ಪ್ರತಿಕ್ಷಾ ಎಂಬುವರು ಮೃತಪಟ್ಟ ದುರ್ದೈವಿಗಳು.
ಭಾನುವಾರದ ಪ್ರಯುಕ್ತ ವೀಕೆಂಡ್ ಪಾರ್ಟಿಗೆಂದು ತೆರಳುವಾಗ ರಾಷ್ಟ್ರೀಯ ಹೆದ್ದಾರಿ 275 ರ ಕಡೆ ಬರುತ್ತಿದ್ದಾಗ (ರಂಗಯ್ಯನ ಕೊಪ್ಪಲು ಗೇಟ್ ಬಳಿ) ಕಾರಿನ ಹಿಂಬದಿ ಟೈರ್ ಪಂಚರ್ ಆಗಿದೆ. ಈ ವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ಎದುರಿನಿಂದ ಬರುತ್ತಿದ್ದ ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. 
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಯುವತಿಯರು ಸ್ಥಳದಲ್ಲಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಿಳಿಕೆರೆ ಪೊಲೀಸರು ಶವಗಳನ್ನು ಹೊರಕ್ಕೆ ತೆಗೆದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಜದಲ್ಲಿ ಎಲ್ಲರೂ ಸಮಾನರು: ಆರ್. ಅಶೋಕ್