Publish Date: Sat, 08 Oct 2022 (21:26 IST)
Updated Date: Sat, 08 Oct 2022 (21:34 IST)
ಟಿಪ್ಪು ಸುಲ್ತಾನ್ ಎಕ್ಸ್ಪ್ರೆಸ್ ಹೆಸರು ಬದಲಾಯಿಸಿದ್ದು ಸರಿಯಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಇದು ತೀವ್ರ ಖಂಡನೆಯ ವಿಚಾರ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದ.ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟ."ಟಿಪ್ಪು ಎಕ್ಸ್ಪ್ರೆಸ್" ಹೆಸರು ಬದಲಾಯಿಸುವ ಸಣ್ಣತನಕ್ಕೆ ಕೇಂದ್ರ ಸರ್ಕಾರ ಕೈ ಹಾಕಬಾರದಿತ್ತು.ಇದು ಅತ್ಯಂತ ಅಗೌರವ,ಅನಾಗರಿಕ ನಾಚಿಕೆಗೇಡು.ಇಂತಹ ಪರಿಸ್ಥಿತಿ ಮುಂದುವರಿದರೆ ಇದು ಯಾರಿಗೂ ಗೌರವ ತರವಂತದಲ್ಲ.ಇದರಿಂದ ನನಗೆ ಬಹಳ ನೋವಾಗಿದೆ ಎಂದು ಕನ್ನಡದ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದಾರೆ.