Select Your Language

Notifications

webdunia
webdunia
webdunia
webdunia

Tiger Attack: ಕೇರಳದಂತೆ ಚಾಮರಾಜನಗರದಲ್ಲೂ ನಡೆಯಿತು ದುರ್ಘಟನೆ

ಚಾಮರಾಜನಗರ ಹುಲಿ ದಾಳಿ

Sampriya

ಚಾಮರಾಜನಗರ , ಮಂಗಳವಾರ, 10 ಜೂನ್ 2025 (17:32 IST)
Photo Courtesy X
ಚಾಮರಾಜನಗರ: ಹುಲಿ ದಾಳಿಗೆ ಮಹಿಳೆ ಬಲಿಯಾಘಿ, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಚಾಮರಾಜನಗರದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೇಡುಗುಳಿ ವಲಯದಲ್ಲಿ ನಡೆದಿದೆ. 

ಮೃತ ಮಹಿಳೆಯನ್ನು ಬೇಡಗುಳಿ ಹಾಡಿಯ ರಂಗಮ್ಮ ಎಂದು ಗುರುತಿಸಲಾಗಿದೆ.  ಗಾಯಗೊಂಡವರನ್ನು ರಾಮಯ್ಯನ ಪೋಡಿನ ರವಿ ಎಂದು ಗುರುತಿಸಲಾಗಿದೆ. ರಂಗಮ್ಮ ಅವರು ಮಂಗಳವಾರ ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದಾಗ ಹುಲಿ ದಾಳಿ ಮಾಡಿ, ಕೊಂದು ಹಾಕಿದೆ. 

ಸೋಮವಾರ ರಾತ್ರಿ ರವಿ ಹಾಡಿಗೆ ಮರಳುವಾಗ ಹುಲಿ ದಾಳಿ ಮಾಡಿದ್ದು, ಅವರ ಕಿರುಚಾಟ ಕೇಳಿ ನೆರವಿಗೆ ಧಾವಿಸಿ, ಸ್ಥಳೀಯರು ಹುಲಿಯನ್ನು ಓಡಿಸಿದ್ದಾರೆ. 

ಇನ್ನೂ ರವಿ ತಲೆಗೆ ಗಂಭೀರ ಸ್ವರೂಪವಾದ ಗಾಯವಾಗಿದೆ.  ಅವರನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

Rajastan: ಜೈಪುರದಿಂದ ಪ್ರವಾಸಕ್ಕೆ ಬಂದಿದ್ದ ಎಂಟು ಯುವಕರು ಬನಾಸ್‌ ನದಿಯಲ್ಲಿ ಮುಳುಗಿ ದಾರುಣ ಸಾವು