ವಿವಾದಿತ ಜಮೀನಿಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡರು..!

Webdunia
ಭಾನುವಾರ, 16 ಡಿಸೆಂಬರ್ 2018 (18:19 IST)
ಜಮೀನು ವಿವಾದ ಕಾರಣದಿಂದಾಗಿ ನಡುಬೀದಿಯಲ್ಲೇ ಎರಡು ಗುಂಪುಗಳ ಜನರು ಬಡಿದಾಡಿಕೊಂಡ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ‌‌ ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಳ್ಳಿಕೆರೆ ಹಾಗೂ ತೊಪ್ಪನಹಳ್ಳಿ ಗ್ರಾಮದ ಎರಡು ಗುಂಪುಗಳ‌ ನಡುವೆ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ 5 ಜನರಿಗೆ ಗಾಯಗಳಾಗಿವೆ. ಹಳ್ಳಿಕೆರೆಯ ತಗಡಯ್ಯ ಎಂಬುವರಿಗೆ ಗಂಭೀರ ಗಾಯವಾಗಿದೆ.

ಹಳ್ಳಿಕೆರೆ ಗ್ರಾಮದ ಪದ್ಮ, ನಾಗಮಣಿ, ಪುಟ್ಟಸ್ವಾಮಿ, ಪವಿತ್ರ, ಸೋಮಶೇಖರ್ ಹಾಗೂ ತೊಪ್ಪನಹಳ್ಳಿ ಗ್ರಾಮದ ಚನ್ನೇಗೌಡ, ಮುತ್ತುರಾಜು, ಮಧು, ಗಾಯಗೊಂಡವರಾಗಿದ್ದಾರೆ.

ಹಳ್ಳಿಕೆರೆ ಗ್ರಾಮದ ಸರ್ವೆ ನಂ. 237ರ ಮೂರು ಎಕರೆ ಜಮೀನನ್ನ ಮಹೇಂದ್ರ ಎಂಬುವರು ಖರೀದಿ‌ ಮಾಡಿದರು. ಬಳಿಕ ಆ ಜಮೀನು ಪಕ್ಕವಿರುವ ಸರ್ವೆ ನಂ.92ರ ಪದ್ಮ ಎಂಬುವರ ಜಮೀನನ್ನು ಮಹೇಂದ್ರ ಒತ್ತುವರಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಈ ವಿಚಾರವಾಗಿ ಮಹೇಂದ್ರ ಬೆಂಬಲಿಗರು ಹಾಗೂ ಪದ್ಮ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ.  ಮದ್ದೂರು ಪೋಲಿಸ್ ಠಾಣೆಯಲ್ಲಿ ಎರಡು ಗುಂಪುಗಳಿಂದ ದೂರು ಪ್ರತಿದೂರು ದಾಖಲಾಗಿವೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದರೋಡೆಗೆ ಬಂದವರನ್ನು ಈ ಇಬ್ಬರು ಹೆಣ್ಣು ಮಕ್ಕಳು ಹಿಮ್ಮೆಟ್ಟಿಸಿದ್ದು ಹೇಗೆ ನೋಡಿ Video

Video: ನಮ್ಮ ಮೆಟ್ರೋವನ್ನು ಬೆಡ್ ರೂಂ ಮಾಡಿಕೊಂಡ ಯುವ ಜೋಡಿ: ಅಸಭ್ಯ ವರ್ತನೆ ವಿಡಿಯೋ ವೈರಲ್

ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ

ತಿಂಗಳಿಗೆ 90 ಸಾವಿರ ದುಡಿತೀನಿ ಸಾರ್.. ಕ್ಯಾಬ್ ಡ್ರೈವರ್ ಹೇಳಿದ ಕತೆ ಕೇಳಿ ಗ್ರಾಹಕ ಫುಲ್ ಶಾಕ್ Video

ರಾಹುಲ್ ಗಾಂಧಿ 20 ದಿನದಿಂದ ವಿದೇಶದಲ್ಲಿದ್ರು, ಎಲ್ಲಿ ಹೋಗಿದ್ರು ಇಷ್ಟು ದಿನ ಎಲ್ಲಿದ್ರು ಕೇಳಿದ್ರಾ: ಬಿಜೆಪಿ ಪ್ರಶ್ನೆ

ಮುಂದಿನ ಸುದ್ದಿ
Show comments