Webdunia - Bharat's app for daily news and videos

Install App

ಲಕ್ಷಾಂತರ ರೂಪಾಯಿ ದೋಚಿದ್ದ ಕಳ್ಳರು ಅಂದರ್

Webdunia
ಭಾನುವಾರ, 4 ಡಿಸೆಂಬರ್ 2022 (18:56 IST)
ಮೋಜು ಮಸ್ತಿ ಮಾಡಲು ಬಿಗ್ರೇಡ್ ರೋಡ್ ಗೆ ಹೋಗಿದ್ದ ಟೆಕ್ಕಿಯನ್ನ ಅಪಹರಿಸಿ ಲಕ್ಷಾಂತರ ರೂಪಾಯಿ ದೋಚಿದ್ದ ನಾಲ್ವರು ಅಪಹರಣಕಾರರನ್ನು ಅಶೋಕನಗರ ಪೊಲೀಸರು ಸೆರಹಿಡಿದಿದ್ದಾರೆ.ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಾಹುಲ್  ವೈರಾಧ್ಯನನ್ನ ಅಪಹರಿಸಿದ ಆರೋಪದಡಿ ತರುಣ್ ಗಣೇಶ್, ಮಣಿಕಂಠ, ವಿಘ್ನೇಶ್ ಹಾಗೂ ಚೇರಿಶ್ ಎಂಬುವರನ್ನು ಬಂಧಿಸಲಾಗಿದೆ. ಹೂಡಿಯ ಸೀತರಾಮಪಾಳ್ಯ ನಿವಾಸಿಯಾಗಿರುವ ರಾಹುಲ್ ಕಳೆದ ತಿಂಗಳು 26ರಂದು ಕಾರಿನಲ್ಲಿ ಕಲ್ಯಾಣ ನಗರಕ್ಕೆ ತೆರಳಿ ಅಲ್ಲೇ ಕಾರು ಪಾರ್ಕಿಂಗ್ ಮಾಡಿ ಚಾಲಕನಿಗೆ ತಿಳಿಸಿ ಅಲ್ಲಿಂದ ಆಟೊದಲ್ಲಿ ಮೋಜು-ಮಸ್ತಿ ಮಾಡಲು ಅಂದು ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಿಗ್ರೇಡ್ ರೋಡ್ ತೆರಳಿದಿದ್ದರು‌. ಈ ವೇಳೆ ವ್ಯಕ್ತಿಯೋರ್ವ ಪರಿಚಯವಾಗಿ ತನ್ನ ಮೊಬೈಲ್ ನಲ್ಲಿದ್ದ ಯುವತಿಯರ ಪೋಟೊ ತೋರಿಸಿದ್ದಾನೆ‌. ಇಷ್ಟವಿಲ್ಲ ಎಂದು ಹೇಳಿ ಆಟೊ ಚಾಲಕನಿಗೆ ತಿಳಿಸಿ ಮತ್ತೆ ಕಲಾಣ್ಯನಗರಕ್ಕೆ ಹೋಗುವಾಗ ಮಾರ್ಗ ಮಧ್ಯೆ ಹಿಂಬದಿಯಿದ ಆರೋಪಿಗಳು ಫಾಲೋ ಮಾಡುತ್ತಿರುವುದನ್ನ ಗಮನಿಸಿದ್ದ ರಾಹುಲ್, ಪೊಲೀಸ್ ಸ್ಟೇಷನ್ ಕಡೆ ಹೋಗುವಂತೆ ಆಟೊ ಚಾಲಕನಿಗೆ ಸೂಚಿಸಿದ್ದ. ಇದರಂತೆ ಹೋಗುವಾಗ ಸೆಂಟ್ರಲ್ ಮಾಲ್ ಬಳಿ ದುಷ್ಕರ್ಮಿಗಳು ಆಟೊ‌ ಅಡ್ಡಗಟ್ಟಿ ರಾಹುಲ್‌ ನನ್ನ ಕಾರಿನಲ್ಲಿ ಅಪಹರಿಸಿದ್ದಾರೆ. ರಾತ್ರಿಪೂರ್ತಿ ಕೆ.ಆರ್.ಪುರ,ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಸೇರಿ ವಿವಿಧ ಕಡೆಗಳಲ್ಲಿ‌ ಸುತ್ತಾಡಿಸಿ ರಾಹುಲ್ ಬಳಿಯಿದ್ದ ಚಿನ್ನಾಭರಣ ಕಸಿದಿದ್ದಾರೆ. ಎಟಿಎಂ ಕಾರ್ಡ್ ಗಳ ಮುಖಾಂತರ ಲಕ್ಷಾಂತರ ರೂಪಾಯಿ ಹಣ ಬಿಡಿಸಿಕೊಂಡಿದ್ದಾರೆ.‌ಅಲ್ಲದೆ‌ ರಾಹುಲ್ ಸಹೋದರರಿಗೆ ಕರೆ ಮಾಡಿಸಿ ಮತ್ತೆ ಎರಡು ಲಕ್ಷ ರೂಪಾಯಿ ಪಡೆದುಕೊಂಡು ಬೆಳಗ್ಗೆ ಕಲ್ಯಾಣನಗರಕ್ಕೆ ಬಿಟ್ಟು ಹೋಗಿದ್ದರು‌. ಚಿನ್ನಾಭರಣ ಸೇರಿ‌ ಒಟ್ಟು 10 ಲಕ್ಷ ರೂಪಾಯಿ ಹಣ ಕಸಿದಿದ್ದಾರೆ ಎಂದು ದೂರು ನೀಡಿದ ಮೇರೆಗೆ ನಾಲ್ವರು ಅಪಹರಣಕಾರರನ್ಮು ಹಡೆಮುರಿಕಟ್ಟುವಲ್ಲಿ ಅಶೋಕ ನಗರ ಪೊಲೀಸರು ಯಶಸ್ಚಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments