Select Your Language

Notifications

webdunia
webdunia
webdunia
webdunia

ಮಾಜಿ ಸಂಸದೆ ರಮ್ಯ ಹೇಳಿಕೆಯಲ್ಲಿ ತಪ್ಪಿಲ್ಲ: ಸಿಎಂ ಸಿದ್ದರಾಮಯ್ಯ ಸಮರ್ಥನೆ

ಮಾಜಿ ಸಂಸದೆ ರಮ್ಯ ಹೇಳಿಕೆಯಲ್ಲಿ ತಪ್ಪಿಲ್ಲ: ಸಿಎಂ ಸಿದ್ದರಾಮಯ್ಯ ಸಮರ್ಥನೆ
ಬೆಂಗಳೂರು , ಸೋಮವಾರ, 29 ಆಗಸ್ಟ್ 2016 (16:31 IST)
ಪಾಕಿಸ್ತಾನದಲ್ಲಿ ನಮ್ಮಲ್ಲಿರುವಂತೆ ಒಳ್ಳೆಯ ಜನರಿದ್ದಾರೆ. ಪಾಕ್ ನರಕವಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ನಟಿ ರಮ್ಯ ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತೆರಳಿ ಊಟ ಮಾಡಿ ಬಂದರೆ ಯಾವ ತಪ್ಪಿಲ್ಲ. ಆದರೆ, ಪಾಕ್ ಜನರು ಒಳ್ಳೆಯವರು ಎಂದು ಹೇಳಿದ್ದಕ್ಕೆ ರಮ್ಯಾ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಕೂಡಾ ಹಿಂದೆ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದರು. ಪ್ರಧಾನಿ ಮೋದಿ ಕೂಡಾ ಪಾಕಿಸ್ತಾನವನ್ನು ಹಲವಾರು ಬಾರಿ ಹೊಗಳಿರುವುದು ತಪ್ಪಿಲ್ಲ. ಆದರೆ ರಮ್ಯಾ ಪಾಕ್ ಜನರು ಒಳ್ಳೆಯವರು ಎಂದಿರುವುದು ಯಾವ ರೀತಿ ತಪ್ಪಾಗುತ್ತದೆ ನೀವೇ ಹೇಳಿ ಎಂದು ಮಾಧ್ಯಮದವರಿಗೆ ತಿರುಗೇಟು ನೀಡಿದರು.
 
ಭಾರತೀಯ ಜನತಾ ಪಕ್ಷ, ಎಬಿವಿಪಿ ಮತ್ತು ಇತರ ಸಂಘಟನೆಗಳಿಗೆ ರಮ್ಯಾ ವಿರುದ್ಧ ಪ್ರತಿಭಟನೆ ನಡೆಸಲು ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಮ್‌ಸುಂಗ್‌ನಿಂದ ಆಧುನಿಕ ತಂತ್ರಜ್ಞಾನದ ಗೆಲ್ಯಾಕ್ಸಿ ನೋಟ್ 7 ಮಾರುಕಟ್ಟೆಗೆ