Select Your Language

Notifications

webdunia
webdunia
webdunia
webdunia

ಕಾಂಗ್ರೆಸ್​​ನ ಯಾವುದೇ ಆಟ ನಡೆಯಲ್ಲ-ಸಿಎಂ

ಕಾಂಗ್ರೆಸ್​​ನ ಯಾವುದೇ ಆಟ ನಡೆಯಲ್ಲ-ಸಿಎಂ
bangalore , ಬುಧವಾರ, 10 ಆಗಸ್ಟ್ 2022 (19:38 IST)
ಮುಂದಿನ ಚುನಾವಣೆ ಮಾಜಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಅವರ ಮಾರ್ಗದರ್ಶನ ಹಾಗೂ ಬೊಮ್ಮಾಯಿ‌ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಟ್ವೀಟ್​​ಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಉತ್ಸವ ಮೂಲಕ ಕಾಂಗ್ರೆಸ್ ಒಳಜಗಳ, ಬೀದಿ ಜಗಳ ದೊಡ್ಡದಾಗಿದೆ. ಕೋಳಿವಾಡ ಅಂಥವರೇ ಇಂದು ಸಿದ್ದರಾಮಯ್ಯ ಅವರನ್ನು ಬೈಯ್ಯುವಂತಹ ಸ್ಥಿತಿಗೆ ಬಂದಿದೆ. ಮುಂದಿನ ಮುಖ್ಯಮಂತ್ರಿಗಳ ಹೋರಾಟ ಜಾಸ್ತಿಯಾಗುತ್ತಿದೆ. ಕಾಂಗ್ರೆಸ್​​ನಲ್ಲಿನ ಆಂತರಿಕ ಜಗಳ, ಗೊಂದಲ ಮುಚ್ಚಿಡುವುದಕ್ಕೆ ಬಿಜೆಪಿ 3ನೇ ಸಿಎಂಗೆ ಕಸರತ್ತು ಎಂಬುದಾಗಿ ಟ್ವೀಟ್ ಮಾಡಿದೆ. ಬಿಜೆಪಿ ಸರ್ಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು. ಗೊಂದಲ ಸೃಷ್ಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಗೊಂದಲಗಳನ್ನು ಸೃಷ್ಟಿಸುವ ಕಾಂಗ್ರೆಸ್​​ನ ಯಾವುದೇ ಆಟ ನಡೆಯಲ್ಲ. ಕಾಂಗ್ರೆಸ್ ಮೊದಲಿಗೆ ಅವರ ಜಗಳ ಬಗೆಹರಿಸಿ ಒಟ್ಟಾಗಿ ಚುನಾವಣೆಗೆ ಹೋಗಲಿ. ಕಾಂಗ್ರೆಸ್ ಭವಿಷ್ಯ ಏನೆಂಬುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ. ಪಕ್ಷದ ಹಗರಣಗಳು ಬಯಲಿಗೆ ಬಂದಿದೆ. ಇವೆಲ್ಲ ಗೊಂದಲಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಇಂತಹ ಟ್ವೀಟ್ ಮಾಡುತ್ತಿದೆ ಎಂದು​​ ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನೆಹರು ಈ ದೇಶವನ್ನು 3 ಭಾಗ ಮಾಡಿದರು-ಕೆ.ಎಸ್. ಈಶ್ವರಪ್ಪ