ರಾಜ್ಯದಲ್ಲಿ ಬೇಜವಾಬ್ದಾರಿ ಸರ್ಕಾರ ಇದೆ-ಅಶೋಕ್

geetha
ಮಂಗಳವಾರ, 9 ಜನವರಿ 2024 (20:00 IST)
ಬೆಂಗಳೂರು-ರಾಜ್ಯಪಾಲರನ್ನ ಭೇಟಿ ಮಾಡಿ ಬರ್ತಿದ್ದೇವೆ.ನಮ್ಮ‌ಜೊತೆ ಸದಾನಂದಗೌಡರು, ಬೊಮ್ಮಾಯಿ, ಅಶ್ವಥ್ ನಾರಾಯಣ್ ಎಲ್ಲರೂ ಇದ್ರು.ರಾಜ್ಯದಲ್ಲಿ ಬೇಜವಾಬ್ದಾರಿ ಸರ್ಕಾರ ಇದೆ.600, 700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಕಡೆ ತಿರುಗಿ ನೋಡ್ತಿಲ್ಲ.ಅಧಿಕಾರಿಗಳು ಭೇಟಿ ಮಾಡಿಲ್ಲ.ಸಚಿವರು ಹೋಗಿಲ್ಲ.ಉ.ಕ ದಲ್ಲಿ ಬರ ಬಂದು ಗುಳೆ ಹೋಗ್ತಿದ್ದಾರೆ.ಬರ ಬಂದು ಇಷ್ಟು ದಿನ ಆದ್ರೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ.

2 ಸಾವಿರ ಹಣ ಕೊಡ್ತೀವಿ ಅಂದ್ರು ಕೊಟ್ಟಿಲ್ಲ.ದಿನನಿತ್ಯ ರೈತರ ಆತ್ಮಹತ್ಯೆ ನಡೆಯುತ್ತಿದ್ರೂ ಅವರ ಕಡೆ ನೋಡ್ತಿಲ್ಲ.ರೈತರು ದಿಕ್ಕು ತೋಚದಂತಾಗಿದ್ದಾರೆ.ನಮ್ಮ ನೆರವಿಗೆ ಬಂದಿಲ್ಲ ಕೇಂದ್ರ ಅಂತಾರೆ.ಬೊಮ್ಮಾಯಿ ಅವರು ಇಲ್ಲೇ ಇದ್ದಾರೆ.ಅವರು ಸಿಎಂ ಆಗಿದ್ದಾಗ, ನಾನು ಕಂದಾಯ ಸಚಿವ ಇದ್ದೆ.ಕೇಂದ್ರಕ್ಕೆ ಮನವಿ ಕೊಟ್ಟಿದ್ದೆವು.ಕೇಂದ್ರದ ಪರಿಹಾರಕ್ಕೆ ಕಾಯದೆ, DBT ಮೂಲಕ 3 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇವೆ.

ನಮ್ಮ ಬಳಿ ದಾಖಲೆ ಇದೆ.ಇವರು ಕೊಡ್ತಿರೋದು 100 ಕೋಟಿ.ರೈತರ ಕಡೆಗಣನೆ ಸ್ಪಷ್ಟವಾಗಿದೆ.ನಾವು ಕೊಟ್ಟ ಮೂರು ತಿಂಗಳ ಬಳಿಕ ಕೇಂದ್ರ ಹಣ ಬಿಡುಗಡೆ ಮಾಡಿತು.ಹಣ ನಮ್ಮ ಖಜಾನೆಗೆ ಬಂತು.NDRF ನಿಯಮದ ಪ್ರಕಾರ 13 ಸಾವಿರ ಕೊಡಬೇಕಿತ್ತು.ನಾವು 26 ಸಾವಿರ ಕೊಟ್ಟೆವು.ರೈತರ ಪರ ಇದ್ದೀವಿ ಅಂತೀರಾ, ನಾಚಿಕೆ ಆಗಬೇಕು ನಿಮಗೆ.ರೈತರು ಬರ ಬರಲಿ ಅಂತ‌ಕಾಯ್ತಿದ್ದಾರೆ, ಹಣ, ಪರಿಹಾರ ಬರುತ್ತೆ ಅಂತ ಮಂತ್ರಿ ಹೇಳ್ತಾರೆ.ಕೂಡಲೇ ಹಣ ಬಿಡುಗಡೆ ಮಾಡಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದೂ ಇರಲಿದೆಯಾ ಸೈಕ್ಲೋನ್ ಮೊಂಥಾ ಇಫೆಕ್ಟ್, ಇಲ್ಲಿದೆ ಹವಾಮಾನ ವರದಿ

ಪ್ರೈವೆಸಿಗೆ ಅಡ್ಡಿಯಾಗುತ್ತಾಳೆಂದು ಮಗಳನ್ನು ಮುಗಿಸಿದ ಮಲತಂದೆ ಕೊನೆಗೂ ಅರೆಸ್ಟ್‌

ಹಂಪಿಯಿಂದ ನಾಪತ್ತೆಯಾಗಿದ್ದ ಯುವಕ ಕೊನೆಗೂ ಪತ್ತೆ, ಎಲ್ಲಿ ಗೊತ್ತಾ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಮಹದೇವಪ್ಪರನ್ನು ಭೇಟಿಯಾಗಿ ನವೆಂಬರ್ ಕ್ರಾಂತಿ ಬಗ್ಗೆ ಪರಮೇಶ್ವರ್ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments