Webdunia - Bharat's app for daily news and videos

Install App

ಐಷಾರಾಮಿ ಜೀವನಕ್ಕಾಗಿ ಉಂಡ ಮನೆಗೆ ದ್ರೋಹ ಬಗೆದ ಕೆಲಸಗಾರರು

Webdunia
ಬುಧವಾರ, 20 ಸೆಪ್ಟಂಬರ್ 2017 (12:46 IST)
ಬೆಂಗಳೂರು: ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಕಂಪನಿಯ ಸಿಇಒ ಮನೆಯಲ್ಲಿ, ಕೆಲಸಗಾರರೇ ಕೋಟ್ಯಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಲ್ಯಾವೆಲ್ಲ ರೋಡ್ ನಲ್ಲಿರುವ Myntra.com ಸಿಇಒ ಅನಂತ್ ನಾರಾಯಣ್ ಕುಟುಂಬದೊಂದಿಗೆ ವಿದೇಶಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸೆ.6 ರಂದು ಮನೆಯಲ್ಲಿ ಕಳುವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬರೋಬ್ಬರಿ 1 ಕೋಟಿ ಮೌಲ್ಯದ ಡೈಮಂಡ್ ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಮನೆಯ ಕೆಲಸದಾಕೆ ಭವಾನಿ ಮತ್ತು ಕಾರು ಚಾಲಕ ಸುರೇಶ್ ಸಹಚರರು ಈ ಕೃತ್ಯವೆಸಗಿದ್ದಾರೆ. ಭವಾನಿ ಮತ್ತು ಸುರೇಶ್ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಸಹ ಮದುವೆಯಾಗುವ ನಿರ್ಧಾರ ಮಾಡಿದ್ದರು. ಮದುವೆ ನಂತರ ಐಷಾರಾಮಿ ಜೀವನ ನಡೆಸಲು ನಿರ್ಧರಿಸಿದ್ದರು. ಹೀಗಾಗಿ ನಾರಾಯಣ್ ಕುಟುಂಬ ವಿದೇಶಕ್ಕೆ ತೆರಳುವುದು ಮೊದಲೇ ತಿಳಿದಿದ್ದ ಭವಾನಿ, ನಾರಾಯಣ್ ಪತ್ನಿ ಪರ್ಸ್ ನಿಂದ ಲಾಕರ್ ಕೀ ಕದ್ದು ತೆಗೆದುಕೊಂಡಿದ್ದಳು. ಸದ್ಯ ಆರೋಪಿ ಭವಾನಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾಳೆ.

ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 6ನೇ ತಾರೀಖಿನಂದು ಪ್ರಕರಣ ದಾಖಲಾಗಿತ್ತು. ಭವಾನಿ ಪ್ರಿಯಕರ ತಮಿಳುನಾಡು ಮೂಲದ ಸುರೇಶ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

22ಅಡಿ ಎತ್ತರದ, 3000ಕೆಜಿ ತೂಕದ ಗಣೇಶ ವಿಗ್ರಹವನ್ನು ಸ್ವಾಗತಿಸುವ ವೇಳೆ ಇದೆಂಥಾ ದುರಂತ, ಇಬ್ಬರು ಸಾವು, Video

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದ ಯಾವ ಭಾಗಕ್ಕೆ ಪ್ರಭಾವ ಬೀರಲಿದೆ ಗೊತ್ತಾ

ರೈಲಿನಲ್ಲಿ ಹೊದಿಕೆಗೆ ಬೆಡ್‌ಶೀಟ್‌ ಕೊಟ್ರೆ ಈ ಮೂವರು ಏನ್ ಮಾಡಿದ್ರು, ನೋಡಿ Video

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿವಾಸಕ್ಕೆ ಉದ್ಯಮಿ ಗೌತಮ್ ಅದಾನಿ ಭೇಟಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಮಗುವಿಗೆ ಸಿರಪ್ ನೀಡುವ ವಿಚಾರದಲ್ಲಿ ದಂಪತಿ ನಡುವೆ ಜಗಳ, ಅಂತ್ಯವಾಗಿದ್ದು ಒಬ್ಬರ ಸಾವಿನಲ್ಲಿ

ಮುಂದಿನ ಸುದ್ದಿ
Show comments