Webdunia - Bharat's app for daily news and videos

Install App

ಚಂದ್ರ ಗ್ರಹಣಕ್ಕೆ ಹೆದರಿ ಊರನ್ನೇ ತೊರೆದ ಗ್ರಾಮಸ್ಥರು

Webdunia
ಶುಕ್ರವಾರ, 27 ಜುಲೈ 2018 (15:31 IST)
ಮೂಢ ನಂಬಿಕೆಗೆ ಹೆದರಿ ಆ ಗ್ರಾಮಸ್ಥರು ಊರನ್ನೇ ತೊರೆದಿದ್ದಾರೆ. ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಊರು ಬಿಟ್ಟ ಇಡೀ ಗ್ರಾಮದ ಜನರು ಪರ ಸ್ಥಳಕ್ಕೆ ತೆರಳಿದ್ದಾರೆ. ಆ ಗ್ರಾಮ ಈಗ ಬಿಕೋ ಎನ್ನುತ್ತಿದೆ.

ಚಂದ್ರ ಗ್ರಹಣದ ವೇಳೆಗೆ ಗ್ರಾಮ ತೊರೆಯದಿದ್ದರೆ ರಕ್ತಕಾರಿ ಸಾಯುವ ಭೀತಿಯಿದೆ ಎಂದು ನುಡಿದ ಭವಿಷ್ಯಕ್ಕೆ ಇಡೀ ಗ್ರಾಮದ ಜನರು ಹೆದರಿದ್ದಾರೆ. ಹೀಗಾಗಿ ಚಂದ್ರಗ್ರಣ ದಿನದವೊತ್ತಿಗೆ ಊರು ಬಿಡದಿದ್ದರೆ ಸಾಯುವ ಭಯದಿಂದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆ ಗ್ರಾಮದ ಹತ್ತಿರದ ಸಿಗುವಾನಿ ಗ್ರಾಮದ ಜನರೆಲ್ಲ ಊರನ್ನೇ ತೊರೆದಿದ್ದಾರೆ. ಈ ಗ್ರಾಮದಲ್ಲಿ ಕಳೆದ 15 ವರ್ಷಗಳಲ್ಲಿ 25 ಸಾವು ಸಂಭವಿಸಿವೆ.

ಹೀಗಾಗಿ ಇಡೀ ಗ್ರಾಮಕ್ಕೆ ಆವರಿಸಿದ ಆತಂಕದಿಂದ ಊರನ್ನೇ ತೊರೆದಿದ್ದಾರೆ. ರಾತ್ರೋ ರಾತ್ರಿ ಊರನ್ನೇ ತೊರೆದ 60 ಕುಟುಂಬಗಳು ಪರಸ್ಥಳಗಳಿಗೆ ತೆರಳಿದ್ದಾರೆ. ಇನ್ನು ನಾವು ಇಲ್ಲೆ ಉಳಿದರೆ ಸಾಯುವ ಭಯ ಕಾಡುವುದು ಪಕ್ಕಾ ಎಂಬುದು ಅಲ್ಲಿನವರಿಗೆ ಆತಂಕ ತಂದೊಡ್ಡಿದ ವಿಷಯವಾಗಿತ್ತು. ಮಲಯಾಳಿ ಮಾಂತ್ರಿಕನ ಭವಿಷ್ಯಕ್ಕೆ ಬೆಚ್ಚಿ ಬಿದ್ದ ಜನರು ಗ್ರಾಮ ತೊರೆದಿದ್ದಾರೆ.  ತಾವು ಸಾಕಿದ್ದ ಸಾಕು ಪ್ರಾಣಿ, ಕೋಳಿಗಳನ್ನು ಬಿಟ್ಟು ಹೋಗಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments