Select Your Language

Notifications

webdunia
webdunia
webdunia
webdunia

ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಗೆ

ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
ರಾಮನಗರ , ಸೋಮವಾರ, 31 ಅಕ್ಟೋಬರ್ 2022 (16:46 IST)
ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್​​​ಗೆ ಸಂಬಂಧಿಸಿದಂತೆ ಶ್ರೀಗಳಿಗೆ ಹನಿಟ್ರ್ಯಾಪ್​ ನಡೆಸಿದ್ದ ಗ್ಯಾಂಗ್​​ ಅಂದರ್​​ ಆಗಿದ್ದು, ರಾಮನಗರದ ಜೈಲಿನಿಂದ ಆರೋಪಿಗಳನ್ನ ಕರೆತಂದ ಪೊಲೀಸರು ಮಾಗಡಿಯ 1ನೇ JMFC ಕೋರ್ಟ್‌ಗೆ ಆರೋಪಿಗಳ ಹಾಜರು ಪಡಿಸಲಾಯಿತು. ನಂತರ ಕೋರ್ಟ್ ಆರೋಪಿಗಳನ್ನು ನವೆಂಬರ್​​​ 4ರ ತನಕ ಪೊಲೀಸ್​​ ಕಸ್ಟಡಿಗೆ ​​​ವಹಿಸಿದೆ. ಆತ್ಮಹತ್ಯೆಗೂ ಮುನ್ನ 6 ಪುಟಗಳ ಡೆತ್‌ನೋಟ್ ಅನ್ನು ಶ್ರೀಗಳು ಬರೆದಿದ್ದು, 6 ಪುಟಗಳ ಪೈಕಿ 3 ಪುಟಗಳ ಡೆತ್‌ನೋಟ್‌ ಪವರ್‌ ಟಿವಿಗೆ ಲಭ್ಯವಾಗಿದೆ. ಡೆತ್‌ನೋಟ್‌ನಲ್ಲಿ ಹನಿಟ್ರ್ಯಾಪ್‌ ಬಗ್ಗೆ ಎಳೆಎಳೆಯಾಗಿ ಉಲ್ಲೇಖ ಮಾಡಲಾಗಿದ್ದು, ಡೆೆತ್‌ನೋಟ್‌ನಲ್ಲಿ ಪ್ರಭಾವಿ ಮುಖಂಡನ ಹೆಸರನ್ನು ಉಲ್ಲೇಖಿಸಲಾಗಿದೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊರ್ಬಿ ದುರಂತಕ್ಕೆ ಮೋದಿ, ಮುರ್ಮು ಸಂತಾಪ