Select Your Language

Notifications

webdunia
webdunia
webdunia
webdunia

ದುಶ್ಚಟ ವ್ಯಸನಿಗಳು ಆತನಿಗೆ ಮಾಡಿದ್ದು ಕೇಳಿದ್ರೆ ಕಣ್ಣೀರು ಬರುತ್ತೆ…

ದುಶ್ಚಟ ವ್ಯಸನಿಗಳು ಆತನಿಗೆ ಮಾಡಿದ್ದು ಕೇಳಿದ್ರೆ ಕಣ್ಣೀರು ಬರುತ್ತೆ…
ಚಿತ್ರದುರ್ಗ , ಗುರುವಾರ, 6 ಜೂನ್ 2019 (18:50 IST)
ದುಶ್ಚಟ ವ್ಯಸನಿಗಳ ತಂಡಕ್ಕೆ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ಕೋಟೆನಾಡು ಚಿತ್ರದುರ್ಗದಲ್ಲಿ ದುಶ್ಚಟ ವ್ಯಸನಿಗಳ ಕಾಟ ಹೆಚ್ಚಾಗಿದ್ದು, ಪುಂಡರ ಬ್ಲೇಡ್ ದಾಳಿಗೆ ಸಿಲುಕಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಸಲ್ಯೂಷನ್ ವ್ಯಸನಿಗಳ ಆರು ಮಂದಿ ತಂಡ ಬಡೇಮಕಾನ್ ನಿವಾಸಿ ಕರೀಂ ಎಂಬ ಯುವಕನ ಮೇಲೆ ಬ್ಲೇಡ್ ನಿಂದ ದಾಳಿಮಾಡಿದೆ.

ಮೂರು ಸಾವಿರ ರೂಪಾಯಿ ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ದುಶ್ಚಟ ವ್ಯಸನಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಕರೀಂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೆ ಆರ್ ಎಸ್ ಬಗೆಗಿನ ನಿಗೂಢ ಸತ್ಯ ಇದೇ!