Select Your Language

Notifications

webdunia
webdunia
webdunia
webdunia

ತಾಯಿಯ ಶೀಲದ ಮೇಲಿನ ಅನುಮಾನಕ್ಕೆ ಮಕ್ಕಳ ಗತಿ ಹೀಗಾ ಆಗೋದು

ತಾಯಿಯ ಶೀಲದ ಮೇಲಿನ ಅನುಮಾನಕ್ಕೆ ಮಕ್ಕಳ ಗತಿ ಹೀಗಾ ಆಗೋದು
ಕಲಬುರಗಿ , ಶುಕ್ರವಾರ, 3 ಜನವರಿ 2020 (13:37 IST)
ಪುಟ್ಟ ಮಕ್ಕಳಿಬ್ಬರು ತಂದೆಯ ಕ್ರೌರ್ಯಕ್ಕೆ ಹಾಗೂ ತಾಯಿಯ ನಡತೆ ಮೇಲಿನ ಅನುಮಾನಕ್ಕೆ ಬಲಿಯಾಗಿದ್ದಾರೆ. 

ಪತಿ ಸಂಜೀವ್ ತನ್ನ ಹೆಂಡತಿಯ ಶೀಲದ ಮೇಲೆ ಸಂಶಯ ಪಡುತ್ತಿದ್ದನು. ಹೀಗಾಗಿ ತನಗೆ ಹುಟ್ಟಿದ್ದ ರೋಹಿತ್, ಪರ್ವಿನ್ ಎಂಬ ಮಕ್ಕಳು ತನ್ನವು ಅಲ್ಲ ಅಂತಾನೇ ಭಾವಿಸುತ್ತಿದ್ದನು.

ಕೊನೆಗೊಂದು ದಿನ ಪತ್ನಿಯ ಶೀಲದ ಮೇಲೆ ಸಂಶಯ ಹೆಚ್ಚಾದಾಗ ಮಕ್ಕಳಿಬ್ಬರನ್ನು ಹೊಲಕ್ಕೆ ಕರೆದುಕೊಂಡು ಹೋಗಿ ವಿಷ ಕುಡಿಸಿ ಕೊಲೆ ಮಾಡಿದ್ದಾನೆ.

ಕೊನೆಗೆ ಅನುಮಾನ ಬರದಿರಲೆಂದು ತಾನೂ ವಿಷ ಕುಡಿದಿದ್ದಾನೆ. ಕಲಬುರಗಿಯ ಚಿಂಚೋಳಿ ತಾಲೂಕಿನ ಭೈರಂಪಳ್ಳಿಯಲ್ಲಿ ಘಟನೆ ನಡೆದಿದ್ದು, ಮಕ್ಕಳಿಬ್ಬರು ಸಾವನ್ನಪ್ಪಿದ್ದರೆ, ಆರೋಪಿ ಸಂಜೀವ್ ಅಪಾಯದಿಂದ ಪಾರಾಗಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಲವರ್ ಜೊತೆ ಓಡಿಹೋಗಿದ್ದ ಪತ್ನಿ – ವಾಪಸ್ ಬಂದಾಗ ಮೊದಲ ಪತಿ ಮಾಡಿದ್ದೇನು?