Publish Date: Thu, 21 Sep 2023 (19:29 IST)
Updated Date: Thu, 21 Sep 2023 (18:37 IST)
ಸುಪ್ರೀಂ ಕೋರ್ಟ್ ಆದೇಶ ದುರಾದೃಷ್ಟಕರ.. ಇಂಥಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡೋದು ಕಷ್ಟ ಎಂದು ಸಚಿವ M.B.ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮಗೆ ಸಂಕಷ್ಟ ಸೂತ್ರ ಇಲ್ಲ.. ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಹುದು.. ವೈಜ್ಞಾನಿಕ ಸೂತ್ರವನ್ನ ಕೂಡಲೇ ಅಳವಡಿಕೆ ಮಾಡಬೇಕು ಎಂದು ಹೇಳಿದ್ರು.. ಕೇಂದ್ರ ಜಲಶಕ್ತಿ ಮಂತ್ರಾಲಯ, ಪ್ರಾಧಿಕಾರ ಮಧ್ಯಪ್ರವೇಶಿಸಬೇಕು.. ತಜ್ಞರ ತಂಡ ಕರೆಸಿ ಪರಿಶೀಲನೆ ಮಾಡಿಸಿ.. ನಂತರ ನೀರು ಬಿಡೋ ಬಗ್ಗೆ ತೀರ್ಮಾನ ಮಾಡಬೇಕು ಎಂದು ಹೇಳಿದ್ರು.