Webdunia - Bharat's app for daily news and videos

Install App

ಕಾಂಗ್ರೆಸ್ ಗೆ ಅಧಿಕಾರ ಕೊಟ್ರೆ ರಾಜ್ಯ ರೌಡಿಗಳ ರಾಜ್ಯ ಆಗಲಿದೆ- ರೇಣುಕಾಚಾರ್ಯ

Webdunia
ಬುಧವಾರ, 4 ಜನವರಿ 2023 (14:05 IST)
ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ನಾಯಿ ಮರಿ ಅಂತ ಹೇಳಿಕೆ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು,ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಒಂದು ಬಾರಿ ಸಿಎಂ ಆಗಿ ಹಿರಿಯ ರಾಜಕಾರಣಿ ಆಗಿದ್ದಾರೆ.ಒಬ್ಬ ಸಿಎಂ ಆಗಿರೋ ಬಸವರಾಜ್ ಬೊಮ್ಮಾಯಿ ಅವರಿಗೆ.ಅನೇಕ ಬಾರಿ ಪ್ರಧಾನಿ ಮೋದಿಯವರಿಗೆ ವಿವಾದಾತ್ಮಕ ಹೇಳಿಕೆ ಕೊಡುತ್ತಾ ಬಂದಿದ್ದಾರೆ.ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿ ಆಗಿದ್ರು.ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಕಂಡ್ರೆ ಹೆದರುತ್ತಿದ್ರು.ಮನಮೋಹನ್ ಸಿಂಗ್ ಕಪಿ ಮುಷ್ಠಿಯಲ್ಲಿದ್ರು.ಮನಮೋಹನ್ ಸಿಂಗ್ ಅವರಿಗೆ ಅವಮಾನ ಮಾಡಿದ್ದು ನಿಮ್ಮ ಪಕ್ಷ.ನಿಮ್ಮ ಹಾಗೆ ಹೆದರಿ ಕೂತಿರಲಿಲ್ಲ.ಬೊಮ್ಮಾಯಿ ಮುತ್ಸದ್ದಿ ರಾಜಕಾರಣಿ.ಮೋದಿಗೆ ಗೌರವ ಕೊಡ್ತಾರೆ.ಮೋದಿ ಅವರು ಸ್ವಾಮೀಜಿ ಕಂಡ್ರೆ ಶಿರಬಾಗಿ ಗೌರವ ಕೊಡ್ತಾರೆ ಎಂದು ರೇಣುಕಾಚಾರ್ಯ ಹೇಳಿದ್ರು.
 
ಇನ್ನೂ ಈ ವೇಳೆ ಕಾಂಗ್ರೆಸ್‌ನಲ್ಲಿ ಲೆಸ್ ಹೈಕಮಾಂಡ್ ಇದೆ.ನಿಮಗೆ ಹೈಕಮಾಂಡ್ ಇದೆಯಾ.?ನಿಮ್ಮ ಪಕ್ಷಕ್ಕೆ ನಾವಿಕನೇ ಇಲ್ಲ.?ಸಿದ್ದರಾಮಯ್ಯ ಅವರೆ ನೀವು ಏನು ಬೇಕಾದ್ರೂ ಹೇಳಿಕೆ ಕೊಡಿ.ನಿಮ್ಮ ಸಂಸ್ಕೃತಿ ತೋರಿಸುತ್ತದೆ.ನಾಯಿ ಮರಿ ಅಂತ ಬಳಸ್ತೀರಾ.?ಸಿದ್ದರಾಮಯ್ಯ ಅವರೆ ನಿಮ್ಮ ಪಕ್ಷ ದೇಶದಲ್ಲಿ, ರಾಜ್ಯದಲ್ಲಿ ಅಧಿಕಾರವೇ ಇಲ್ಲ.ಮತ್ತೊಮ್ಮೆ ಬರ್ತೀವಿ ಅಂತ ಕನಸು ಕಾಣ್ತಿದ್ದೀರಾ.?ನಿಮ್ಮದು ಯಾವ ರೀತಿಯ ಸಂಸ್ಕೃತಿ ಅಂತ ಗೊತ್ತಿದೆ‌ .ಡಿಕೆ ಶಿವಕುಮಾರ್ ಹೇಳ್ತಾರೆ ಚಿಲುಮೆ ಬಗ್ಗೆ.ನಿಮ್ಮ ಕಾಲದ ಚಿಲುಮೆ ಸಂಸ್ಥೆ.ಕಾಂಗ್ರೆಸ್‌ಗೆ ಅಧಿಕಾರ ಕೊಟ್ರೆ ರಾಜ್ಯ ರೌಡಿಗಳ ರಾಜ್ಯ ಆಗಲಿದೆ.ಬಿಜೆಪಿ ಹಿಂದುತ್ವ, ಸನಾತನ ಹಿಂದುತ್ವ ಅಳವಡಿಸಿಕೊಂಡಿದೆ.ನೀವು ಒಂದು ಕಡೆ ರೌಡಿಗಳ ರೀತಿ ಆಡ್ತೀರಿ, ಭಯೋತ್ಪಾದನೆ ಬೆಂಬಲಿಸ್ತೀರಾ.ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೂ ಇದೇ ಪದ ಬಳಸ್ತೀದ್ರ, ಈಗ ಬೊಮ್ಮಾಯಿ ಅವರಿಗೆ ಬಳಸ್ತಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments