Publish Date: Wed, 08 Aug 2018 (17:09 IST)
Updated Date: Wed, 08 Aug 2018 (17:12 IST)
ರಾಜಕಾರಣಿಗಳು ಕಾರ್ಯಕ್ರಮಗಳು, ಕಾಮಗಾರಿಗಳನ್ನು ಉದ್ಘಾಟಿಸುವುದರಲ್ಲೆ ಹೆಚ್ಚಾಗಿರ್ತಾರೆ. ಅವರದ್ದೇನಿದ್ದರೂ ಬರೀ ಭಾಷಣ ಎನ್ನೋರಿಗೆ ಈ ಶಾಸಕ ಮಾತ್ರವಲ್ಲ ಸಚಿವರಾಗಿದ್ದರೂ ಅಪರೂಪವಾಗಿ ನಿಲ್ಲುತ್ತಾರೆ. ತಾವೇನು ಕಡಿಮೆ ಇಲ್ಲ ಎನ್ನುವಂತೆ ಕಲಾ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಸಣ್ಣ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಕಾರ್ಯಕ್ರಮವೊಂದರಲ್ಲಿ ಗಮನ ಸೆಳೆದಿದ್ದಾರೆ. ಅಶ್ವಮೇಧ ಚಿತ್ರದ ಹಾಡು ಹೇಳುವ ಮೂಲಕ ನೆರೆದಿದ್ದ ಜನ್ರನ್ನ ರಂಚಿಸಿದ್ದಾರೆ. ಮಂಡ್ಯ ಕಲಾಮಂದಿರದಲ್ಲಿ ನಡೆದ ಎಂದೂ ಮರೆಯದ ಹಾಡು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಸಚಿವರು, ಅಶ್ವಮೇಧ ಚಿತ್ರದ ಹಾಡು ಹಾಡಿದರು.
ಈ ವೇಳೆ ನೆರೆದಿದ್ದ ಜನ್ರು ಚಪ್ಪಾಳೆ, ಸಿಳ್ಳೆ ಹಾಕುವ ಮೂಲಕ ಸಚಿವರ ಹಾಡಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.